ಕಾಂಗೈ: 13 ಹೊಸಬರು; ಕೃಷ್ಣರಾವ್, ಪ್ರಸಾದ್ಗೆ ಕೊಕ್
ನವದೆಹಲಿ, ಏ. 3– ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ನಿನ್ನೆ ರಾತ್ರಿ ಎರಡೂವರೆಯ ಹೊತ್ತಿಗೆ ಬಿಡುಗಡೆ ಮಾಡಿದ ತನ್ನ ಎರಡನೇ ಪಟ್ಟಿಯಲ್ಲಿ ಬಸವರಾಜೇಶ್ವರಿ, ವಿ. ಕೃಷ್ಣರಾವ್, ವಿ. ಶ್ರೀನಿವಾಸ ಪ್ರಸಾದ್, ಎಸ್.ಬಿ. ಸಿದ್ನಾಳ್, ಚಂದ್ರಪ್ರಭಾ ಅರಸ್ ಅವರಿಗೆ ಟಿಕೆಟ್ ನಿರಾಕರಿಸಿದ್ದು ಈ ಬಾರಿ ಹದಿಮೂರು ಮಂದಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.
ಮಂಡ್ಯ ಕ್ಷೇತ್ರಕ್ಕೆ ಅಂಬರೀಷ್ ಬದಲು ಮತ್ತೆ ಜಿ. ಮಾದೇಗೌಡ ಮತ್ತು ಹಾಸನ ಕ್ಷೇತ್ರಕ್ಕೆ ಶ್ರೀಕಂಠಯ್ಯ ಅವರ ಬದಲು ಎ. ಆನಂದ್ ಎಂಬುವವರಿಗೆ ಟಿಕೆಟ್ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.