‘ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಪಕ್ಷಿಗಳಿಗೆ ನೀರು–ಆಹಾರದ ವ್ಯವಸ್ಥೆ ಮಾಡಿರುವ ಮಣ್ಣು ಪರೀಕ್ಷಾ ಕೇಂದ್ರ’ ವರದಿ (ಪ್ರ.ವಾ., ಮಾರ್ಚ್ 22) ಓದಿ ಸಂತೋಷವಾಯಿತು.
ಕೆಲಸದ ಒತ್ತಡಗಳ ನಡುವೆಯೂ ಈ ರೀತಿಯ ಮಾನವೀಯ ಸ್ಪಂದನೆ ತೋರಿರುವ ಇಲಾಖೆಯ ಸಿಬ್ಬಂದಿ ಅಭಿನಂದನಾರ್ಹರು. ಪ್ಲಾಸ್ಟಿಕ್ ಮರುಬಳಕೆ, ಪರಿಸರ, ಮೃಗ–ಖಗಗಳ ಕಾಳಜಿ ಅಗತ್ಯ. ಸಿಬ್ಬಂದಿಯ ಒಗ್ಗಟ್ಟಿನ ಶ್ರಮದಿಂದ ಇಂತಹ ಉತ್ತಮ ಕಾರ್ಯ ಸಾಧ್ಯವಾಗಿದೆ.
ಈ ಅನುಕರಣೀಯ ಕಾರ್ಯದಲ್ಲೊಂದು ಕಿವಿಮಾತು: ಊರು– ನಗರಗಳಲ್ಲಿ ವಾಸಿಸುವ ಪಕ್ಷಿಗಳಿಗಿಂತ ಕಾಡು– ಹೊಲಗಳಲ್ಲಿ ವಾಸಿಸುವ, ಮಾನವರ ಹತ್ತಿರವೂ ಸುಳಿಯದ ಪ್ರಾಣಿ–ಪಕ್ಷಿಗಳಿಗೆ ನೀರಿನ ಅಭಾವ ಕಾಡುವುದು ಹೆಚ್ಚು. ಹಾಗಾಗಿ ಕಾಡು– ಹೊಲಗಳ ಬಳಿ ನೀರು, ಆಹಾರದ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲದೆ, ಒಡೆದ ಮಡಕೆ, ಮುರಿದ ಬಕೆಟ್, ಪ್ಲಾಸ್ಟಿಕ್ ಲೋಟಗಳು, ಟೈರ್ಗಳು, ಬಳಸಿದ ಪೇಂಟ್ ಡಬ್ಬಗಳೂ ನೀರು–ಆಹಾರ ಇಡಲು ಯೋಗ್ಯವಾಗಿವೆ. ಆದ್ದರಿಂದ ಈ ಸರಳ ಕಾರ್ಯವನ್ನು ಪ್ರತಿಯೊಬ್ಬರೂ ಕೈಗೊಂಡು ಮೃಗ–ಖಗಗಳ ಜೀವ ಉಳಿಸಬಹುದಲ್ಲವೇ?
– ಮಹೇಶ್ವರ ಹುರಕಡ್ಲಿ, ಬಾಚಿಗೊಂಡನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.