ಇದ್ಯಾವ ನ್ಯಾಯ ಸ್ವಾಮಿ?
Published 20 ಡಿಸೆಂಬರ್ 2012, 19:59 IST Last Updated 20 ಡಿಸೆಂಬರ್ 2012, 19:59 IST ಭಾರತದ ಪ್ರಖ್ಯಾತ ಉದ್ಯಮಿಗಳಲ್ಲಿ ಒಬ್ಬರಾದ ವಿಜಯ ಮಲ್ಯ ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಡರು. ಅದಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಕ್ಕೆ 3 ಕೆ.ಜಿ. ತೂಕದ ಚಿನ್ನದ ಇಟ್ಟಿಗೆಯನ್ನು ನೀಡಿದ್ದಾರೆ. ಅವರದೇ ಸಂಸ್ಥೆಯಾದ `ಕಿಂಗ್ ಫಿಶರ್' ಕಂಪೆನಿ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ ಎಂದು ಹೇಳುತ್ತಾ ನೌಕರರ ಸಂಬಳ ಕೊಡದೆ ಸತಾಯಿಸುತ್ತಿರುವರು.
ಕಳೆದ ಬಾರಿ ತಾನೇ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ 80 ಲಕ್ಷ ಮೌಲ್ಯದ ಚಿನ್ನವನ್ನು ನೀಡಿರುವುದು. ಇನ್ನೂ ಹಸಿರಾಗಿರುವಾಗಲೇ ಹೀಗೆ ದಾನದ ಹೆಸರಿನಲ್ಲಿ ಹಣವನ್ನು ಪೋಲು ಮಾಡುವ ಬದಲು, ನೌಕರರಿಗೆ ಸಂಬಳ ನೀಡಿದರೆ ಸಂಸ್ಥೆಯ ಜೊತೆಗೆ ನೌಕರರ ಜೀವನಕ್ಕೂ ಒಂದು ಉತ್ತಮ ನೆಲೆ ಸಿಕ್ಕಂತಾಗುತ್ತದೆ.