ADVERTISEMENT

ಎಲಿವೇಟೆಡ್ ಕಾರಿಡಾರ್: ‘ಬೇಡ’ ಚಳವಳಿಗೇಕೆ ಈ ಸ್ಥಿತಿ?

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 20:01 IST
Last Updated 17 ಮಾರ್ಚ್ 2019, 20:01 IST

ಬೆಂಗಳೂರಿನಲ್ಲಿ ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯ ವಿರುದ್ಧ ನಡೆಯುತ್ತಿರುವ ‘ಬೇಡ’ ಚಳವಳಿಯ ವರದಿ ಓದಿದಾಗ, ಫೋಟೊಗಳನ್ನು ನೋಡಿದಾಗ ನನ್ನ ಗಮನಕ್ಕೆ ಬಂದದ್ದು; ಚಳವಳಿಗಾರರು ಹಿಡಿದಿದ್ದ ಫಲಕಗಳಲ್ಲಿ ‘ಬೇಡ’ ಎನ್ನುವ ಪದದ ಲಿಪಿಯೂ ಸೇರಿದಂತೆ ಬಹುತೇಕ ಇಂಗ್ಲಿಷ್‌ಮಯವಾಗಿದ್ದವು. ಏಕೆ ಹೀಗೆ? ನಮ್ಮ ಸರ್ಕಾರಕ್ಕೆ ಕನ್ನಡ ಅರ್ಥವಾಗುವುದಿಲ್ಲವೆಂದೋ ಅಥವಾ ಚಳವಳಿಗಾರರಿಗೆ ಕನ್ನಡ ಬರೆಯಲು ಬರುವುದಿಲ್ಲವೋ ಅಥವಾ ಬೇಡ ಎನ್ನುವ ಪದ ‘ನೋ’ ಎಂದಾಗುವ ದಿನಗಳು ಹತ್ತಿರ ಬರುತ್ತಿವೆ ಎನ್ನುವುದರ ಮುನ್ಸೂಚನೆಯೋ?

-ಅಡೇಖಂಡಿ ಮಾಧವ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT