ADVERTISEMENT

ಕೆರೆಯ ಒಡಲಿಗೆ ತ್ಯಾಜ್ಯ

ರವಿಕುಮಾರ್
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಚಿಕ್ಕಬಾಣಾವರ ಕೆರೆಗುಡ್ಡದಹಳ್ಳಿ ಗಂಗಾಧರಯ್ಯ ಕಲ್ಯಾಣ ಭವನದ ಹತ್ತಿರ ರಾತ್ರೋರಾತ್ರಿ ಕಟ್ಟಡದ ಅವಶೇಷ ಸೇರಿದಂತೆ ಬೃಹತ್‌ ಪ್ರಮಾಣದ ತ್ಯಾಜ್ಯವನ್ನು ರಸ್ತೆ ಬದಿಗೆ ಹಾಗೂ ಚಿಕ್ಕಬಾಣಾವರ ಕೆರೆಗೆ ಯಾರೋ ತಂದು ಸುರಿಯುತ್ತಾರೆ.

ಟ್ರ್ಯಾಕ್ಟರ್‌, ಲಾರಿಗಳಲ್ಲಿ ತಂದು ಸುರಿಯುತ್ತಾರೆ. ಕೆಲವೊಮ್ಮೆ ಬಿಬಿಎಂಪಿ ಲಾರಿಗಳೂ ಕಾಣುತ್ತವೆ. ಆದರೆ ಇದನ್ನು ಯಾರೂ ಗಮನಸಿದಂತೆ ಕಾಣುತ್ತಿಲ್ಲ. ದಯವಿಟ್ಟು ಇದನ್ನು ಗಮನಿಸಿ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ಯಾವುದೇ ಪರಿಣಾಮವಾಗದಂತೆ ಪರಿಸರ ಮಾಲಿನ್ಯ ತಡೆಗಟ್ಟಬೇಕಿದೆ. ಈ ಸಮಸ್ಯೆಯನ್ನು ಸಂಬಂಧಪಟ್ಟವರು ತುರ್ತು ಗಮನಹರಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.