ADVERTISEMENT

ಕೇಂದ್ರದ ಮಲತಾಯಿ ಧೋರಣೆ!

​ಪ್ರಜಾವಾಣಿ ವಾರ್ತೆ
Published 8 ಜುಲೈ 2012, 19:30 IST
Last Updated 8 ಜುಲೈ 2012, 19:30 IST

ಜೂನ್ ಕೊನೆಯ ವಾರದಲ್ಲಿ ಅಸ್ಸಾಂ ಪ್ರವಾಹಕ್ಕೆ ಸಿಲುಕಿತು. ಮಾರನೆಯ ದಿನವೇ ಪ್ರಧಾನಿ ಹಾಗೂ ಸೋನಿಯಾ ಅವರಿಂದ ವೈಮಾನಿಕ ಸಮೀಕ್ಷೆ, ಜುಲೈ 2 ರಂದೇ 500 ಕೋಟಿ ನೆರವಿನ ಪ್ರಕಟಣೆ. ಅಸ್ಸಾಂ ಜನ ಎಷ್ಟೊಂದು ಪುಣ್ಯವಂತರು!! ಮೂರು ವರ್ಷಗಳ ಹಿಂದೆ ಉತ್ತರ ಕರ್ನಾಟಕವನ್ನು ನಡುಗಿಸಿದ ನೆರೆ ಸಂತ್ರಸ್ತರಿಗೆ ಕೇಂದ್ರ ಯಾವಾಗ ಪರಿಹಾರ ನೀಡಿತ್ತು!? ಈ ವರ್ಷದ ಮೊದಲ 6 ತಿಂಗಳ ಕರ್ನಾಟಕದ ಬರಕ್ಕೆ ಕೇಂದ್ರ ಎಷ್ಟು ನೆರವು ನೀಡಿದೆ? ಕಳೆದ ಮೂರು ವರ್ಷಗಳಿಂದ ಕರ್ನಾಟಕ ಬರದಲ್ಲಿ ಬೆಂದಿದೆ! ನೆರೆಯಲ್ಲಿ ನಡುಗಿದೆ! ಕೇಂದ್ರ ಕರ್ನಾಟಕಕ್ಕೆ  ಆಗ ಸಕಾಲದಲ್ಲಿ ನೆರವಿಗೆ ಬಂತೆ!? 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.