ADVERTISEMENT

ಕೊಳವೆಬಾವಿ ನೀರು ಯೋಗ್ಯವೇ?

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ತಮಿಳುನಾಡಿನಲ್ಲಿ ಮಳೆ ನೀರು ಸಂಗ್ರಹಿಸಿ ಬಳಸುವ ಕುರಿತಂತೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರಿಗಳನ್ನು ಕಳು ಹಿಸಿ ವರದಿಯೊಂದನ್ನು ತಯಾರಿಸಿದ್ದರು. ಅವರ ಅಧಿಕಾರಾವಧಿ ಮುಗಿದಿದ್ದರಿಂದ ಅನುಷ್ಠಾನ ಗೊಳಿಸಲು ಆಗಲಿಲ್ಲ. ತಮಿಳುನಾಡಿನ ಜನರು ಮನೆಗಳ ಮೇಲೆ ಬಿದ್ದ ನೀರನ್ನು  ಒಂದು ತೊಟ್ಟಿಯಲ್ಲಿ ಸಂಗ್ರಹಿಸಿ ಬಳಸುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಋತುಮಾನದ ವೈಪರೀತ್ಯಗಳಿಂದ ಮಳೆ ಏರುಪೇರಾಗಿದೆ. ಪದೇ ಪದೇ ಬರಗಾಲ ಬರುತ್ತಿದೆ. ಅಂತರ್ಜಲ ಮಟ್ಟ ಕುಸಿದಿದೆ. ಈಗ ಕೊಳವೆ ಬಾವಿ ನೀರು ಸುರಕ್ಷಿತ ಅಲ್ಲ.

ರಾಮ ನಗರದಲ್ಲಿ ಈ ವರ್ಷ 30ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ.  ಹಳ್ಳಿಗಳಲ್ಲೂ ಸಾಕಷ್ಟು ಬಾವಿಗಳನ್ನು ಕೊರೆಸಲಾಗಿದೆ. ಅವುಗಳ ನೀರು ಬಳಕೆಗೆ ಯೋಗ್ಯವೇ ಎಂಬುದನ್ನು ಪರೀಕ್ಷಿ ಸದೆ ಜನರಿಗೆ ಬಳಸಲು ಅವಕಾಶ ಕೊಡಬಾರದು. ನಗರ ಸಭೆ, ಆರೋಗ್ಯ ಇಲಾಖೆಗಳು ಈ ಕುರಿತು ಜನರಿಗೆ ತಿಳುವಳಿಕೆ ನೀಡಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.