
ಗ್ರಂಥವಿಜ್ಞಾನದ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಜನ್ಮದಿನದ ನೆನಪಿನಲ್ಲಿ ಆಗಸ್್ಟ 12ರಂದು ‘ಗ್ರಂಥಪಾಲಕರ ದಿನ’ ಆಚರಿಸಲಾಗುತ್ತದೆ. ಗ್ರಂಥಸೂಚಿ ಹಾಗೂ ವಿಷಯವಾರು ವಿಂಗಡಣೆಯಿಂದಾಗಿ ಸಾವಿರಾರು ಪುಸ್ತಕಗಳ ನಡುವೆಯೂ ನಮಗೆ ಬೇಕಾದ ಪುಸ್ತಕ ಸುಲಭವಾಗಿ ಕೈಗೆ ಸಿಗುವಂತಹ ವ್ಯವಸ್ಥೆಯನ್ನು ಜಾರಿಗೆ ತಂದವರು ರಂಗನಾಥನ್. ಈ ತತ್ವವನ್ನು ಪರದೇಶದ ಗ್ರಂಥಾಲಯಗಳೂ ಅಳವಡಿಸಿಕೊಂಡಿವೆ.
ಇದರ ಜೊತೆಗೆ ರಂಗನಾಥನ್ ನೀಡಿದ ಕೆಲವು ಸೂತ್ರಗಳು ಜಗತ್ತಿನ ಗ್ರಂಥಾಲಯಗಳ ಸುಧಾರಣೆಗೆ ನೆರವಾಗಿವೆ. ಹೀಗಾಗಿ ವೇಗದ ಬದುಕಿನ ಈ ಕಂಪ್ಯೂಟರ್ ಯುಗದಲ್ಲೂ ರಂಗನಾಥನ್ ಪ್ರಸ್ತುತ ಎನಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.