ಕರ್ನಾಟಕದ ವಿಧಾನಸಭೆ ಚುನಾವಣೆಯ ಕಾವು ಏರುಬಿಸಿಲಿನ ಜೊತೆಗೆ ಏರುತ್ತಲೇ ಇದೆ. ಪ್ರಮುಖ ಪಕ್ಷಗಳ ಮುಖಂಡರು, ತಾವೇ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ವಿಶ್ವಾಸ ಇಟ್ಟುಕೊಂಡು, ಗೆಲುವಿಗಾಗಿ ಎಲ್ಲ ರೀತಿಯ ಕಸರತ್ತು ನಡೆಸುತ್ತಿದ್ದಾರೆ.
ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ‘ತ್ರಿಶಂಕು ವಿಧಾನಸಭೆ’ಯ ಭವಿಷ್ಯ ನುಡಿದಿವೆ. ಮತದಾರನ ಮನದಿಂಗಿತ ಚಿದಂಬರ ರಹಸ್ಯ! ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ದಕ್ಕದಿದ್ದರೆ ‘ಕುದುರೆ ವ್ಯಾಪಾರ’ ಶುರು. ರಾಜ್ಯದಲ್ಲಿ ಅಂಥ ಪರಿಸ್ಥಿತಿ ಬಾರದಿರಲಿ ಎಂಬುದು ಮತದಾರರ ನಿರೀಕ್ಷೆ.
–ಪ್ರೊ. ಆರ್.ವಿ. ಹೊರಡಿ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.