ಬಿಬಿಎಂಪಿಯ ತೇಪೇ ಕೆಲಸಕ್ಕೆ ಇಲ್ಲಿದೆ ಉದಾಹರಣೆ. ಭುವನೇಶ್ವರಿನಗರ (ಕತ್ರಗುಪ್ಪೆ)ದ 3ನೇ ಅಡ್ಡರಸ್ತೆ, 4ನೇ ಮುಖ್ಯ ರಸ್ತೆ ಸೇರುವಲ್ಲಿ ರಸ್ತೆಗೆ ಟಾರು ಹಾಕುವ ಕೆಲಸ 2-3 ದಿವಸ ನಡೆಯಿತು. ಆದರೆ ಟಾರು ಹೋಗಲಿ, ಇಲ್ಲಿ ಜಲ್ಲಿ ಸುರಿದು, ರಸ್ತೆಯಲ್ಲೆಲ್ಲಾ ಗುಂಡಿ ತೋಡಿ ಹೋಗಿದ್ದಾರೆ. ರಸ್ತೆಯಲ್ಲಿ ವಾಹನ ಓಡಿಸುವುದು, ನಡೆಯುವುದು ಕಷ್ಟವಾಗಿದೆ.
ಈ ವಿಭಾಗದ ಶಾಸಕರಾದ ಅಶೋಕ್ ಹಾಗೂ ಬಿ.ಎಸ್. ವೆಂಕಟಸ್ವಾಮಿ ನಾಯ್ಡು ಅವರು ಪಾದಯಾತ್ರೆ ಮಾಡಿದರೆ ಈ ಸುಖಾನುಭವದ ಅರಿವು ಅವರಿಗಾದೀತು.
-
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.