ಉತ್ತರ ತಹಸೀಲ್ದಾರ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರು ಕೆಲಸದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಉದಾಸೀನ ಮನೋಭಾವದಿಂದ ಕೆಲಸ ಮಾಡುತ್ತಾರೆ.
ಸಂಧ್ಯಾ ಸುರಕ್ಷಾ ಯೋಜನೆಯ ಅಡಿಯಲ್ಲಿ ಮಾಸಾಶನವನ್ನು ಪಡೆಯುತ್ತಿದ್ದ ವೃದ್ಧರಿಗೆ ಈ ಮಾಸಾಶನ ನಿಲ್ಲಿಸಿರುವ ಮಾಹಿತಿಯೇ ಇಲ್ಲ. ಕಾರಣ ಸರ್ಕಾರದ ಈ ದಿಢೀರ್ ನಿರ್ಧಾರದ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಆಗಿ ನಿಲ್ಲಿಸಿದ್ದೇಕೆ ಎಂದು ಯಾರಿಗೂ ತಿಳಿದಿಲ್ಲ.
ಆದರೆ ಕೈಗೆ ತಿಂಗಳಿಗೆ ಸ್ವಲ್ಪವಾದರೂ ಹಣ ಸಿಕ್ಕಿ ನೆಮ್ಮದಿಯಿಂದ ಇದ್ದವರಿಗೆ ಈಗ ಅದೂ ಕೂಡಾ ನಿಂತು ಹೋಗಿದೆ. ಅದನ್ನು ವಿಚಾರಿಸಲು ತಹಸೀಲ್ದಾರ್ ಆಫೀಸಿಗೆ ಹೋಗಿ ವಿಚಾರಿಸಿದರೆ ಅಲ್ಲಿ ಸಿಗುವ ಉತ್ತರ ಏನೂ ಗೊತ್ತಿಲ್ಲ. ಕೆ
ಳಗಡೆಗೆ ಹೋಗಿ ಎಂದು ಅಲ್ಲಿಗೆ ಹೋದರೆ ನಮಗೇನೂ ಗೊತ್ತಿಲ್ಲ. ಮೂರನೇ ಮಹಡಿಯಲ್ಲಿ ವಿಚಾರಿಸಿ ಎಂಬ ಸಿದ್ಧ ಉತ್ತರಗಳನ್ನು ಕೊಟ್ಟು ಸಾಗಹಾಕುತ್ತಾರೆ. ಆದರೆ ಈಗ ಅಲ್ಲಿರುವ ಬಹಳ ಮಹಿಳಾ ನೌಕರರು ಸಮರ್ಪಕ ಮಾಹಿತಿಯನ್ನಾದರೂ ನೀಡುವಂತಾಗಲಿ. ಉನ್ನತಾಧಿಕಾರಿಗಳು ಈ ಮಹಿಳಾ ನೌಕರರಿಗೆ ಸರಿಯಾಗಿ ನಿರ್ದೇಶನ ನೀಡಲು ವಿನಂತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.