ADVERTISEMENT

ದಸರಾ ಮೆರುಗಿಗೆ ಕುಂದು ಬೇಡ

ಉಮೇಶ ವಿ., ಬೆಳಗಾಲಪೇಟೆ, ಹಾನಗಲ್
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಮೈಸೂರು ದಸರಾಕ್ಕೆ ಮೆರುಗು ತಂದುಕೊಡುವುದೇ ಆನೆ ಮೇಲಿನ ಚಿನ್ನದ ಅಂಬಾರಿಯ ಮೆರವಣಿಗೆ. ಈ ಕುರಿತು ಎದ್ದಿರುವ ವಿರೋಧ ಅತಿ ನಾಸ್ತಿಕತೆಯ ಸಂಕೇತವಷ್ಟೇ. ಮೆರವಣಿಗೆಯನ್ನು ವೀಕ್ಷಿಸಿದ ಯಾರಿಗಾದರೂ ಅಂಬಾರಿ, ಆನೆಗೆ ಭಾರ ಅನಿಸುವುದಿಲ್ಲ ಎಂಬುದು ಮನವರಿಕೆಯಾಗುತ್ತದೆ. ಗಜಪಡೆಯ ಗಾಂಭೀರ್ಯಕ್ಕೆ ಸಂದ ಗೌರವ ಎನಿಸುತ್ತದೆ.

ಶಕ್ತಿಶಾಲಿ ಆನೆಗೆ 750 ಕೆ.ಜಿ ತೂಕದ ಅಂಬಾರಿ ಹೊರುವುದು ಹಿಂಸೆ ಆಗಲಾರದು. ಅದು ಆನೆಯ ಶಕ್ತಿಸಾಮರ್ಥ್ಯಕ್ಕೆ ಸಲ್ಲುವ ಗೌರವವೆಂದೇ ಹೇಳಬಹುದು. ಪರಂಪರೆಯ ಒಳ್ಳೆಯ ಅಂಶಗಳನ್ನು ಗೌರವಿಸೋಣ. ಎಲ್ಲದಕ್ಕೂ ಕ್ಯಾತೆ ತೆಗೆದರೆ ಕೊನೆಗೆ ಉಳಿಯುವುದಾದರೂ ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.