ಸುಖ ಸಂಸಾರ ಬಿಟ್ಟು ತಿಂಗಳಾನುಗಟ್ಟಲೆ ದಟ್ಟ ಕಾಡಿನಲ್ಲಿ ಇದ್ದು ಸದಾ ತಮ್ಮನ್ನು ಅಪಾಯಗಳಿಗೆ ಒಡ್ಡಿಕೊಳ್ಳುವ ನಕ್ಸಲರು ತಮಗಾಗಿ ಕೇಳುತ್ತಿರುವುದು ಏನೂ ಇಲ್ಲ. ಅವರು ಕೇಳುತ್ತಿರುವುದು ಶತಮಾನಗಳಿಂದ ಶೋಷಣೆಗೊಳಗಾದವರ ಹಕ್ಕನ್ನು.
ಅನಿವಾರ್ಯವಾದ ಮೂಲ ಸೌಕರ್ಯಗಳನ್ನು.ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು. ಹಾಗಾಗಿ ಸರ್ಕಾರಗಳು ಅವರಿಗೆ ಕೋವಿಯ ಉತ್ತರ ನೀಡುವುದರ ಬದಲು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಭ್ರಷ್ಟಾಚಾರ ರಹಿತವಾಗಿ ಮೂಲಸೌಕರ್ಯ ದೊರೆಯುವಂತೆ ಶಾಸನ ರೂಪಿಸಲಿ. ನಂತರ ನಕ್ಸಲರೇ ಕೋವಿ ಬದಿಗಿಟ್ಟು ಗಾಂಧೀವಾದಿಗಳಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.