ನಗರದ ಅತಿ ಮುಖ್ಯಭಾಗವಾಗಿರುವ ಸುಬ್ರಹ್ಮಣ್ಯಪುರದ ಪೊಲೀಸ್ ಠಾಣೆ ಮುಂಭಾಗದಲ್ಲಿ ಹಾಕಿರುವ ನಾಮಫಲಕದಲ್ಲಿಯೇ ತಪ್ಪು ಬರೆಯಲಾಗಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ನಾವು ವಾಸವಾಗಿದ್ದೇವೆ. ಕನ್ನಡದ ನೆಲದಲ್ಲಿಯೇ ಕನ್ನಡ ಭಾಷೆಗೆ ಕಳಂಕವಾದಂತಾಗುವುದಿಲ್ಲವೇ? ಒಮ್ಮೆ ಕೆಲಸದ ನಿಮಿತ್ತ ನಾನು ಸುಬ್ರಹ್ಮಣ್ಯಪುರ ಠಾಣೆಗೆ ಹೋಗಿದ್ದಾಗ ನನಗೆ ಈ ಫಲಕದಲ್ಲಿ ಕನ್ನಡದ ತಪ್ಪು ಬರವಣಿಗೆ ಕಣ್ಣಿಗೆ ಕಾಣಿಸಿತು. ಇದನ್ನು ಸರಿಪಡಿಸಬೇಕಾಗಿ ಸಂಬಂಧಪಟ್ಟವರಲ್ಲಿ ಮನವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.