ADVERTISEMENT

ನಿಂದನೆಗೆ ಕಡಿವಾಣ ಹಾಕಿ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:40 IST
Last Updated 3 ಮೇ 2018, 19:40 IST

ಬೇಸಿಗೆಯ ರಣಬಿಸಿಲಿನ ಜೊತೆಗೆ ಚುನಾವಣೆಯ ಕಾವೂ ಏರಿದ್ದು, ಜನರನ್ನು ಹೈರಾಣಾಗಿಸಿದೆ.

ಎಲ್ಲಾ ಪಕ್ಷಗಳ ನಾಯಕರು ತಮ್ಮ ಎದುರಾಳಿ ಪಕ್ಷದವರನ್ನು ನಿಂದಿಸುವುದು, ಹೀಯಾಳಿಸುವುದು, ಏಕವಚನದಲ್ಲಿ ಸಂಬೋಧಿಸುವುದು ನಿರಂತರ ನಡೆದಿದೆ. ಇದನ್ನು ನೋಡಿ, ಕೇಳಿ ಮತದಾರನಿಗೆ ಅಸಹ್ಯ ಆಗುತ್ತಿದೆ.

ಯಾರೊಬ್ಬರೂ ರಾಜ್ಯದ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ, ವಾಹನ ದಟ್ಟಣೆ ಮುಂತಾದ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇನ್ನೊಬ್ಬರನ್ನು ನಿಂದಿಸಿ, ಜನರ ಚಪ್ಪಾಳೆ ಗಿಟ್ಟಿಸುವುದೇ ಮುಖ್ಯವಾದಂತಿದೆ.

ADVERTISEMENT

ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ, ನಿಂದನೆ ಮಾಡುವವರ ವಿರುದ್ಧ ಕ್ರಮ ಕೈಗೊಂಡು, ಇದಕ್ಕೆಲ್ಲ ಕಡಿವಾಣ ಹಾಕುವುದೇ?

–ವಿ. ತಿಪ್ಪೇಸ್ವಾಮಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.