ADVERTISEMENT

ನಿತ್ಯದ ಗೋಳು

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಬಡತನ ಸ್ವಾಮಿ,
ಎಲ್ಲಿ ಸಿಗಬೇಕು ನಮಗೆ
ತುಪ್ಪ, ತರಕಾರಿ, ಬೇಳೆ, ಬೆಲ್ಲ?
ಹೊಟ್ಟೆಗಿದ್ದರೆ
ಬಟ್ಟೆಗಿಲ್ಲ, ಬಟ್ಟೆಗಿದ್ದರೆ
ಹೊಟ್ಟೆಗಿಲ್ಲ
ಎರಡು ಹೊತ್ತು
ಸಿಕ್ಕರೆ ಅನ್ನ,ತಿಳಿಸಾರು
ಅದೇ ಮೃಷ್ಟಾನ್ನ ನಮಗೆ
ಅರ್ಥವಾಗಲಿಕ್ಕಿಲ್ಲ
ಬಿಡಿ ನಿಮಗೆ
ನಮ್ಮ ನಿತ್ಯದ ಗೋಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.