ಮಾತೆ ಮಹಾದೇವಿ ಅವರು ಬಸವಣ್ಣನ ವಚನಾಂಕಿತವನ್ನು ‘ಲಿಂಗದೇವ’ ಎಂದು ಬದಲಾಯಿಸಿದ್ದನ್ನು ವಿರೋಧಿಸಿ ಕೆಲವು ಬಸವಾನುಯಾಯಿ ಮಠಾಧೀಶರು ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದನ್ನು ಬಿಟ್ಟಿದ್ದರು.
ಈಗ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ಅದೇ ಮಠಾಧೀಶರು ಮತ್ತೆ ಅವರೊಂದಿಗೆ ಕೈ ಜೋಡಿಸಿದ್ದಾರೆ. ಅಂದರೆ, ಮಾತೆ ಮಹಾದೇವಿ ವಚನಾಂಕಿತವನ್ನು ಬದಲಾಯಿಸಿದ್ದನ್ನು ಇವರು ಒಪ್ಪಿಕೊಂಡರೇ? ಮಠಾಧೀಶರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ.
–ಶಿವಕುಮಾರ ಬಂಡೋಳಿ, ಸುರಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.