

ಬಸವನಗುಡಿ ವಿಧಾನಸಭಾ ಕ್ಷೇತ್ರದ ಗಿರಿನಗರ ವಾರ್ಡ್ಗೆ ಸೇರಿದ ನೆಹರೂ ರಸ್ತೆಯ ಅದೇ ಹೆಸರಿನ ವೃತ್ತದ ಆಟೊ ನಿಲ್ದಾಣದ ಬಳಿ ಮೂಲೆಯ ಖಾಲಿ ನಿವೇಶನಕ್ಕೆ ಹೊಂದಿಕೊಂಡಂತೆ ಕಟ್ಟೆಯೊಂದು ಇದ್ದು, ರಸ್ತೆಯಲ್ಲಿ ಸಂಚರಿಸುವ ದಾರಿಹೋಕರು ಈ ಕಟ್ಟೆ ಏರಿ ಮೂಲೆಯ ಖಾಲಿ ನಿವೇಶನದಲ್ಲಿ ಮಲ–ಮೂತ್ರಗಳನ್ನು ವಿಸರ್ಜಿಸಿರುತ್ತಾರೆ.
ಇದರಿಂದ ಈ ರಸ್ತೆಯಲ್ಲಿ ವಾಸನೆ ಹೆಚ್ಚಾಗಿದ್ದು, ಸೊಳ್ಳೆಗಳ ತವರು ಇದಾಗಿದೆ. ದಯವಿಟ್ಟು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು, ನಗರಸಭಾ ಸದಸ್ಯರು ಈ ವೃತ್ತಕ್ಕೆ ಭೇಟಿ ನೀಡಿ, ಈ ಕಟ್ಟೆಯಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
–ಗಿರಿನಗರ ನಿವಾಸಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.