ಬೆಕ್ಕಿನ ಮರಿಯೇ,
ಬೆಕ್ಕಿನ ಮರಿಯೇ,
ಎಲ್ಲಿಗೆ ಹೋಗಿದ್ದೇ?!
ದವಾಖಾನೆಗೆ ಹೋಗಿದ್ದೆ
ಅಲ್ಲಿಗೇಕೆ ಹೋಗಿದ್ದೆ?
ವೈದ್ಯರ ಪ್ರಮಾಣ ಪತ್ರ
ಬೇಕಿತ್ತು, ನ್ಯಾಯಾಲಯಕ್ಕೆ
ಒಪ್ಪಿಸಲು
ನಿನ್ನ ದೋಸ್ತ ಕಟ್ಟಾನ
ಬಳಿ ಹಾಲಿನ ಬಾಟ್ಲಿ
ಉಂಟಂತೆ! ಕುಡಿಯಾಕೆ
ಹೋಗ್ತಿಯಾ?
ಮೈಲಿ ಹುಷಾರಿಲ್ಲ
ಇಲ್ಲೇ ಮಲಗಿರ್ತೀನಿ!
-ಕೆ.ಜಿ. ಭದ್ರಣ್ಣವರ, ಮುದ್ದೇಬಿಹಾಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.