ADVERTISEMENT

ಬಯಸದೇ ಬಂದ ಭಾಗ್ಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 15:35 IST
Last Updated 23 ಫೆಬ್ರುವರಿ 2011, 15:35 IST

ಕನಸಿನ ಕನ್ಯೆಯ ಕೈ ಕುಲುಕುವ ಭಾಗ್ಯ ಯಾರಿಗುಂಟು ಯಾರಿಗಿಲ್ಲ? ಸದಾ ಕೋಪ, ತಾಪ, ದುಗುಡು ದುಮ್ಮಾನಗಳಿಂದ ಬುಸುಗುಡುತ್ತಿದ್ದ ಯಡಿಯೂರಪ್ಪನವರ ವದನ ಕೊನೆಗೂ ಅರಳಿತು “ಕಮಲ”ದಂತೆ!

ಕನಸಿನ ಕನ್ಯೆಯು ನಾಮ ಪತ್ರ ಸಲ್ಲಿಸಿದ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಚಿತ್ರದಲ್ಲಿ, ಬಲಗಡೆ ವಿಜಯದ ನಗೆಬೀರಿರುವ ಈಶ್ವರಪ್ಪ.

ಈ ನಯನ ಮನೋಹರವಾದ ದೃಶ್ಯವನ್ನು ನೋಡುತ್ತಿರುವ ಶೋಭಕ್ಕನಿಗೆ ಏನನ್ನಿಸಿರಬೇಕು? ಇದೇ ರೀತಿ ಸೇರ್ಪಡೆಯಾಗಲಿ ಕರ್ನಾಟಕದ ರಾಜಕೀಯಕ್ಕೆ ಪರಭಾಷಾ ಚಿತ್ರನಟಿಯರ ದಂಡು....?

ಈ ಅದ್ಭುತವಾದ ಫೋಟೋವನ್ನು ನೋಡುತ್ತಿರುವ ಧೀರ? ಕನ್ನಡಿಗ ನೀನೆಷ್ಟು ಧನ್ಯ? ಇದಲ್ಲವೇ ನಿಜವಾದ ಕರ್ನಾಟಕದ “ಸಾಧನೆ”?                 
              
         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.