
ಪ್ರಜಾವಾಣಿ ವಾರ್ತೆತುಮಕೂರು, ಚಿತ್ರದುರ್ಗ, ಕೋಲಾರ ಜಿಲ್ಲೆಗಳಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ತುಮಕೂರು ಜಿಲ್ಲೆಯ ಬಹುತೇಕ ತಾಲ್ಲೂಕುಗಳು ಮಳೆ ಇಲ್ಲದೆ ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. 
ಇಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಬಿತ್ತಿದ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಜೋಳ, ಎಳ್ಳು, ನೆಲಗಡಲೆ, ಮಳೆ ಬರದೆ ಒಣಗಿ ಹೋಗಿ, ತಾನು ಮಾಡಿದ ವೆಚ್ಚವೂ ರೈತನಿಗೆ ಸಿಗಲಿಲ್ಲ.
 ಇನ್ನು ಜುಲೈ - ಆಗಸ್ಟ್ ತಿಂಗಳುಗಳಲ್ಲಿನ ಹಿಂಗಾರು ಬೆಳೆಗಳಾದ ರಾಗಿ, ಜೋಳ, ಶೇಂಗಾ, ಬತ್ತ (ಕೆಂಪು ಬರ ಬತ್ತ) ಬೆಳೆಗಳಲ್ಲಿ ಸಹ ಮಳೆ ಇಲ್ಲದೆ, ಒಣಗಿ ಹೋಗಿವೆ. ರೈತರು ಬಿತ್ತನೆ ಬೀಜಕ್ಕೆ ರಾಸಾಯನಿಕ ಇಲ್ಲವೆ ಸಾವಯವ ಗೊಬ್ಬರಕ್ಕೆ ಮಾಡಿದ ಖರ್ಚು ಹಾಗೂ ತನ್ನ ಕೂಲಿ; ಸಿಗದೆ ತುಂಬಾ ನಷ್ಟದಲ್ಲಿದ್ದಾನೆ. ಆದ್ದರಿಂದ ಸರ್ಕಾರ ಈ ಎಲ್ಲಾ ತಾಲ್ಲೂಕು ಗಳನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ನೀಡಬೇಕು.
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.