ADVERTISEMENT

ಬೆಂಬಲ ಬೆಲೆ ಕೊಡಿ

ಡಾ.ಎಚ್‌.ಆರ್‌.ಪ್ರಕಾಶ್‌
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST

ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚಮಾಡಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಚೆಗೆ ಸಮಾವೇಶ ಏರ್ಪಡಿಸಿತ್ತು. ಆದರೆ, ಸಿರಿಧಾನ್ಯಗಳನ್ನು ಬೆಳೆದ ರೈತರಿಂದ ಉತ್ಪನ್ನವನ್ನು ಖರೀದಿಸಲು ಸರ್ಕಾರದ ನೆರವಿಲ್ಲದೆ ರೈತರು ಅಧೋಗತಿಗೆ ಇಳಿದಿದ್ದಾರೆ.

ಕೇಂದ್ರ ಸರ್ಕಾರವು ರಾಗಿ ಮತ್ತು ಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದೆ. ಆದರೆ ನವಣೆ, ಸಾಮೆ, ಹಾರಕ, ಬರಗು ಹಾಗೂ ಉದ್ಲು ಬೆಳೆಗಳಿಗೆ ಯಾವ ಸರ್ಕಾರವೂ ಬೆಂಬಲ ಬೆಲೆ ಘೋಷಿಸಿಲ್ಲ. ದಾವಣಗೆರೆ ಸಾವಯವ ಮಾರುಕಟ್ಟೆ ಫೇಡರೇಷನ್‌ನವರು (ಕ್ವಿಂಟಲ್‌ಗೆ) ನವಣೆಗೆ ₹ 1600, ಸಾಮೆಗೆ ₹ 2500, ಹಾರಕಕ್ಕೆ ₹ 2400, ಬರಗುಗೆ ₹ 2700, ಕೊರಲೆಗೆ ₹ 4500 ಹಾಗೂ ಉದ್ಲುಗೆ ₹ 2500 ಬೆಲೆ ಘೋಷಿಸಿದ್ದಾರೆ.

ಆದರೆ ಮಾಲ್‌ಗಳಲ್ಲಿ ಈ ಸಿರಿಧಾನ್ಯಗಳು ಕ್ವಿಂಟಲ್‌ಗೆ ₹ 6000 ದಿಂದ ₹ 10,000 ಬೆಲೆಗೆ ಮಾರಾಟವಾಗುತ್ತಿವೆ. ಸಿರಿಧಾನ್ಯಗಳನ್ನು ಬೆಳೆದ ರೈತರ ನೆರವಿಗೆ ಸರ್ಕಾರ ಈಗಲಾದರೂ ಧಾವಿಸಿ ಸೂಕ್ತ ಬೆಲೆಯನ್ನು ಕೊಡಿಸಬೇಕು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.