
ಪ್ರಜಾವಾಣಿ ವಾರ್ತೆಬೆಂಗಳೂರು ವಿಶ್ವವಿದ್ಯಾಲಯ ಬಹು ದೊಡ್ಡದಾಗಿ ಬೆಳೆದಿದೆ. ಇದರ ಕಾರ್ಯವ್ಯಾಪ್ತಿಯಲ್ಲಿ 657 ಕಾಲೇಜುಗಳು ಕೆಲಸ ನಿರ್ವಹಿಸುತ್ತಿವೆ. ಇದರ ಭೌಗೋಳಿಕ ವ್ಯಾಪ್ತಿಯು ನಾಲ್ಕು ಜಿಲ್ಲೆಗಳನ್ನು ಆವರಿಸಿಕೊಂಡಿದೆ.
ಇವುಗಳ ನಿಯಂತ್ರಣ, ಪರೀಕ್ಷೆ ಕೆಲಸ ಹಾಗೂ ಉತ್ತಮ ಆಡಳಿತ ನಡೆಸುವುದು ಕಷ್ಟ. ಗುಣಮಟ್ಟದ ಶಿಕ್ಷಣ ಕಾಪಾಡಿಕೊಳ್ಳುವುದೂ ಕಷ್ಟವಾಗಿದೆ.
ಈ ಕಾರಣಗಳಿಂದ ವಿಶ್ವವಿದ್ಯಾ ಲಯವನ್ನು ಎರಡು ಭಾಗಗಳನ್ನಾಗಿಸಲು ತೀರ್ಮಾನಿಸಲಾಗಿತ್ತು. ಈ ವಿಭಜನೆ ಶಿಕ್ಷಣ ತಜ್ಞರ ಅಭಿಪ್ರಾಯವೂ ಆಗಿದೆ. ಈಗಾಗಲೇ ಈ ಕೆಲಸ ನಿರ್ವಹಿಸಲು ವಿಶೇಷ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
ಹೀಗಿರುವಾಗ ಈಗ ಈ ಕೆಲಸದಿಂದ ವಿಮುಖರಾಗುವುದು ಸರಿಯಲ್ಲ.
-ಪ್ರೊ.ಟಿ. ನಾರಾಯಣಪ್ಪ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.