ADVERTISEMENT

ಮನಸ್ಥಿತಿ ಬದಲಾಗಲಿ

ಕೆ.ಸಿ.ರತ್ನಶ್ರೀ ಶ್ರೀಧರ್‌
Published 14 ಮೇ 2018, 19:30 IST
Last Updated 14 ಮೇ 2018, 19:30 IST

ಚುನಾವಣೆಯಲ್ಲಿ ಗೆಲುವು ಸಾಧಿಸಲು ಕೆಲವರು ನಡೆಸಿರುವ ಅಕ್ರಮ ಬಯಲಾಗಿ ಒಂದು ಕ್ಷೇತ್ರದಲ್ಲಿ ಚುನಾವಣೆ ಮುಂದೂಡಲಾಗಿದೆ. ಇಂತಹ ವಾಮ ಮಾರ್ಗಗಳ ಮೂಲಕ ಚುನಾವಣೆ ಎದುರಿಸುವುದು ಅತ್ಯಂತ ಹೇಯಕರ ಮತ್ತು  ಪ್ರಜಾಪ್ರಭುತ್ವಕ್ಕೆ ಮಾರಕ. ಸಂವಿಧಾನದ ಮೌಲ್ಯ ಹಾಗೂ ನೈತಿಕತೆಗೆ ಧಕ್ಕೆ ಉಂಟುಮಾಡುವ ಇಂತಹ ಅಪರಾಧಗಳಿಗೆ ಸರಿಯಾದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

ಈಚಿನ ವರ್ಷಗಳಲ್ಲಂತೂ ಚುನಾವಣಾ ಅಕ್ರಮಗಳನ್ನು ಜನರು ಒಪ್ಪಿಕೊಂಡಂತೆ ಭಾಸವಾಗುತ್ತಿದೆ. ಈ ಪರಿಸ್ಥಿತಿ ಬದಲಾಗಿ, ಅಕ್ರಮಗಳನ್ನು ಖಂಡಿಸುವ ಮನಸ್ಥಿತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ‘ನಮಗ್ಯಾಕೆ ಇಲ್ಲದ ಉಸಾಬರಿ’ ಎಂಬ ಮನೋಭಾವ ದೂರವಾಗಿ, ಪ್ರಜಾಪ್ರಭುತ್ವದ ಮೌಲ್ಯ ಉಳಿಸುವುದು ಎಲ್ಲರ ಜವಾಬ್ದಾರಿಯಾದಾಗ ಮಾತ್ರ ಸುಂದರವಾದ ಪ್ರಜಾತಂತ್ರ ವ್ಯವಸ್ಥೆ ರೂಪಿಸುವುದು ಸಾಧ್ಯವಾದೀತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT