ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ಕುಮಾರ್, ಇತ್ತೀಚೆಗೆ ನಿವೇಶನ ಹಗರಣದಲ್ಲಿ ಆಪಾದನೆ ಬಂದ ಕೂಡಲೇ ತಕ್ಷಣ ರಾಜೀನಾಮೆ ಕೊಟ್ಟರು.
ನಿವೇಶನವನ್ನೂ ವಾಪಸ್ ಮಾಡಿದರು! ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಆರೋಪ ಅವರ ಮೇಲಿತ್ತು. ಆದರೆ ಸಿ.ಎಂ. ಸದಾನಂದಗೌಡರು ಈ ಆರೋಪ ಕುರಿತು ವಿಚಾರಣೆ ಮಾಡಿ ಅಭಿಪ್ರಾಯ ತಿಳಿಸಲು ಅಡ್ವೊಕೇಟ್ ಜನರಲ್ರನ್ನು ಕೋರಿದರು!
ಸಿ.ಎಂ. ರಿಂದ ನೇಮಕವಾದ ಅಡ್ವೊಕೇಟ್ ಜನರಲ್ಅವರು ಸುರೇಶ್ಕುಮಾರರಿಗೆ ಕ್ಲೀನ್ಚಿಟ್ ಕೊಟ್ಟ ತಕ್ಷಣ ಅವರು ರಾಜೀನಾಮೆ ವಾಪಸ್ ಪಡೆದದ್ದು ಮಾತ್ರ `ರಾಜಿ~ನಾಮೆ ಪ್ರಹಸನ ಎನಿಸಿಬಿಟ್ಟಿತು! ತಪ್ಪು ಮಾಡಿರದಿದ್ದರೆ ನಿವೇಶನ ವಾಪಸ್ ಮಾಡಿದ್ದೇಕೆ?
.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.