ಸರ್ವಶಿಕ್ಷಣ ಅಭಿಯಾನ ಯೋಜನೆಯ ಅನುದಾನದಲ್ಲಿ ವೇತನ ಪಡೆಯುತ್ತಿರುವ ಶಿಕ್ಷಕರು ವರ್ಗಾವಣೆಗಾಗಿ ನಡೆಯುವ ಕೌನ್ಸಿಲಿಂಗ್ ಸಮಯದಲ್ಲಿ ಅದೇ ಯೋಜನೆಯ ಖಾಲಿ ಹುದ್ದೆಗೆ ಹೋಗಬೇಕೆಂಬ ನಿಯಮ ಈ ವರ್ಷವೂ ಬದಲಾಗಿಲ್ಲ. ಹಿಂದಿನ ವರ್ಗಾವಣೆಯಲ್ಲೂ ಇದೇ ನಿಯಮ ಇದ್ದ ಕಾರಣ ಸಾಮಾನ್ಯ ಖಾಲಿ ಹುದ್ದೆಗಳಿಗೆ ಹೋಗಲು ಅವಕಾಶ ನಿರಾಕರಿಸಲಾಯಿತು.
ಪತಿ ಪತ್ನಿ ಪ್ರಕರಣ, ತೀವ್ರ ಕಾಯಿಲೆ, ಇನ್ನಿತರ ವಿಶೇಷ ಸಂದರ್ಭದ ಅವಕಾಶ ಎಲ್ಲರಿಗೂ ಲಭ್ಯವಿಲ್ಲ. ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಹಿಂದಿನ ವರ್ಗಾವಣೆಯಲ್ಲಿ ಸರ್ವಶಿಕ್ಷಣ ಅಭಿಯಾನದ ಒಂದೂ ಹುದ್ದೆಗಳು ಖಾಲಿ ಇರಲಿಲ್ಲ.
ಎಲ್ಲಾ ಜಿಲ್ಲೆಗಳಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಜಾರಿಯಲ್ಲಿದೆ. ವರ್ಗಾವಣೆಯಾಗಿ ಹೋದ ಶಿಕ್ಷಕರಿಗೆ ಇದೇ ಯೋಜನೆಯ ಅನುದಾನದಲ್ಲಿ ವೇತನ ನೀಡಬಹುದಲ್ಲವೇ? ಈ ನಿಯಮಗಳನ್ನು ಬದಲಾಯಿಸದೇ ಪತಿ ಪತ್ನಿ ಪ್ರಕರಣ ಸೇರಿದಂತೆ ವಿಶೇಷ ಆದ್ಯತೆಯಡಿ ಅರ್ಜಿ ಸಲ್ಲಿಸಿದವರ ಪಾಡೇನು? ಶಿಕ್ಷಣ ಸಚಿವರಿಗೆ ಶಿಕ್ಷಕರ ಕಷ್ಟಗಳೇ ಅರ್ಥವಾಗುವುದಿಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.