
ಪ್ರಜಾವಾಣಿ ವಾರ್ತೆನಮ್ಮ ರಾಜ್ಯದ ಆಡಳಿತ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಹಾಗೂ ಹೈಕೋರ್ಟ್ಗಳಿಗೆ ಕೆಲಸದ ನಿಮಿತ್ತ ಅಥವಾ ಅವನ್ನು ನೋಡುವ ಸಲುವಾಗಿ ಬರುವ ಜನ ಸಾಮಾನ್ಯರಿಗೆ ಮುಕ್ತ ಪ್ರವೇಶ ಸಿಗುತ್ತಿಲ್ಲ. ಈ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲಿದೆ. ದೂರದ ಊರಿನಿಂದ ಬಂದವರಿಗೆ ಕಿರಿಕಿರಿ ಆಗುವ ರೀತಿಯಲ್ಲಿ ತಪಾಸಣೆ ಮಾಡುತ್ತಾರೆ. ಪ್ರವೇಶಕ್ಕೆ ಸಚಿವರು, ಶಾಸಕರು ಅಥವಾ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದಿದ್ದರೂ ಪ್ರವೇಶ ಕಷ್ಟವಾಗುತ್ತಿದೆ.
ಪ್ರವಾಸಿಗಳಿಗೆ ಸುಲಭ ವೀಕ್ಷಣೆಗೆ ಅನುಕೂಲವಾಗುವಂತಹ ಒಂದು ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ನಿಯಮಗಳನ್ನು ಸಡಿಲಿಸಿ ಸುಲಭ ಪ್ರವೇಶ ಸಿಗುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.