ADVERTISEMENT

ವೃದ್ಧರಿಗೆ ಮಾಸಾಶನ ಸಲೀಸಾಗಿ ಸಿಗಲಿ

ನೀಲಾಂಬರಿ ಶರ್ಮಾ, ಬೆಂಗಳೂರು
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಸಂಧ್ಯಾ ಸುರಕ್ಷಾ ಯೋಜನೆಯಡಿ ಅಶಕ್ತರಿಗೆ, ವೃದ್ಧರಿಗೆ, ಬಡ ವಿಧವೆಯರಿಗೆ ಸರ್ಕಾರ, ತಿಂಗಳಿಗೆ ₨ 500 ಮಾಸಾಶನ  ನೀಡುತ್ತಿದೆ.  ಈ ಹಣ  ಅಂಚೆ ಅಣ್ಣನ (ಅಥವಾ ಅಂಚೆ ಅಕ್ಕ) ಮೂಲಕ ಫಲಾನುಭವಿಗಳಿಗೆ ತಲುಪುತ್ತದೆ. ಆದರೆ ಅಂಚೆಯವರು ತಿಂಗಳಿಗೆ ₨ 50  ಹಿಡಿದುಕೊಂಡು ಕೊಡುತ್ತಾರೆ. ಇದು ಅಲಿಖಿತ  ನಿಯಮ.

ಒಬ್ಬ ಅಂಚೆಯವನ ಬಟವಾಡೆ ವ್ಯಾಪ್ತಿಯಲ್ಲಿ  ಹತ್ತು ಜನರಿಗೆ  ಈ ಮಾಸಾಶನ ಬರುತ್ತದೆ ಯೆಂದರೆ  ಈ ಅಂಚೆಯವನಿಗೆ ತಿಂಗಳಿಗೆ ₨ 500   ಮೇಲು ಸಂಪಾದನೆ!  ಫಲಾನುಭವಿಗಳು ತಕರಾರು ಮಾಡುವುದಿಲ್ಲ. ಮೂರು ತಿಂಗಳ ಬಾಕಿ ಒಟ್ಟಿಗೆ ಬಂದರೆ ತಿಂಗಳಿಗೆ  ₨ 50 ರಂತೆ ಒಟ್ಟು ₨ 150 ಕೊಡಬೇಕು!

ಸರ್ಕಾರ ನೀಡುತ್ತಿರುವ ಮಾಸಾಶನ ವೃದ್ಧರಿಗೆ  ತಿಂಗಳ ಔಷಧಕ್ಕೂ ಸಾಕಾಗದು. ಅದರಲ್ಲಿ ಈ ರೀತಿ ಸೋರಿಕೆ ಬೇರೆ!  ಇದನ್ನು ತಪ್ಪಿಸುವುದು ತುರ್ತು ಅಗತ್ಯ. ಸರ್ಕಾರದ ವತಿಯಿಂದಯೇ  ಅಂಚೆ ಇಲಾಖೆಯಲ್ಲಿ  ಉಳಿತಾಯ ಖಾತೆ ತೆಗೆದು ಅಲ್ಲಿಗೆ ಹಣ ಜಮಾ ಆಗುವಂತೆ ಮಾಡಿದರೆ ಈ ಸಮಸ್ಯೆ ನಿವಾರಣೆ ಆಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.