ADVERTISEMENT

ವೈರಮುಡಿ ಉತ್ಸವ: ಸ್ಪಷ್ಟನೆ

ಎಸ್‌.ವರದರಾಜ ಭಟ್ಟರ್‌, ಪ್ರಧಾನ ಅರ್ಚಕ, ಮೇಲುಕೋಟೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

‘ಭಕ್ತಸಾಗರ ಮಧ್ಯೆ ವೈರಮುಡಿ ಉತ್ಸವ’ ಎಂಬ ಶೀರ್ಷಿಕೆಯಡಿ, ಮಂಡ್ಯ ಜಿಲ್ಲೆಯ ಮೇಲು­ಕೋಟೆಯ  ಪ್ರಸಿದ್ಧ ವೈರಮುಡಿ ಉತ್ಸವದ ಬಗ್ಗೆ ‘ಪ್ರಜಾವಾಣಿ’ಯಲ್ಲಿ  ಸುದ್ದಿ ಪ್ರಕಟವಾಗಿದೆ (ಮಾ.14). ‘ಸಂಜೆ ಜಿಲ್ಲಾಧಿಕಾರಿ ಸಮ್ಮುಖ­ದಲ್ಲಿ ಆಭರಣಗಳನ್ನು ದೇವಸ್ಥಾನದ ಸ್ಥಾನಿಕರಿಗೆ ವಿತರಣೆ (ಪರ್ಕಾವಣೆ)  ಮಾಡಲಾಯಿತು.

ಆನಂತರ ಅವರು ದೇವರನ್ನು ಆಭರಣಗಳಿಂದ ಅಲಂಕರಿಸಿದರು’ ಎಂಬ ಅಂಶ ಸುದ್ದಿಯಲ್ಲಿದೆ. ಆದರೆ ವೈರಮುಡಿ ಕಿರೀಟ ಆಭರಣದ ಪೆಟ್ಟಿಗೆಯ ಸೀಲ್‌ ಪರಿಶೀಲಿಸಿದ ನಂತರ ದೇವ­ಸ್ಥಾನದ ಪ್ರಧಾನ ಅರ್ಚಕ ವರದರಾಜ ಭಟ್ಟರ್‌ ಮತ್ತು ಮೊದಲನೇ ಸ್ಥಾನಿಕ ಕರಗಂ
ನಾರಾ­ಯಣ­ಯ್ಯಂಗಾರ್‌ ಅವರ ಜಂಟಿ ಸುಪರ್ದಿಗೆ ದೇವರ ಧಾರಣೆ ಬಗ್ಗೆ ಹಸ್ತಾಂತರಿ­ಸಲಾಗುತ್ತದೆ ಮತ್ತು ಅರ್ಚಕರು ಕಿರೀಟವನ್ನು ದೇವರಿಗೆ ಧರಿಸಿ ಅಲಂಕರಿಸುತ್ತಾರೆಯೇ ವಿನಾ ಸ್ಥಾನಿಕರಲ್ಲ.

ಈ ವರ್ಷವೂ ಅದೇ ರೀತಿ ನಡೆದಿದೆ. ರಾಜಮುಡಿ ಮತ್ತು ಅದರ ಜೊತೆ ಬಂದಿ­ರುವ ಇತರೆ ಆಭರಣಗಳನ್ನೂ ಅರ್ಚಕರು, ಪರಿ­ಚಾರಕರು ಮತ್ತು 4 ಜನ  ಸ್ಥಾನಿಕರು, ಕಾವಲು­ಗಾರರು ಇವರ ಜಂಟಿ ಸುಪರ್ದಿಗೆ ವಹಿಸಲಾ­ಗು­ತ್ತದೆಯೇ ವಿನಾ ಸ್ಥಾನಿಕರಿಗೆ ಮಾತ್ರ ವಿತರಿಸು­ವು­ದಿಲ್ಲ.  ಈ ಆಭರಣಗಳನ್ನು ಸಹ ಅರ್ಚಕರು ಮಾತ್ರ ದೇವರಿಗೆ ಧರಿಸಿ ಅಲಂಕರಿಸುತ್ತಾರೆಯೇ ವಿನಾ ಸ್ಥಾನಿಕರಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಮೇಲಿ­ನಂತೆಯೇ ನಡೆದಿದೆ. ಈ ಕುರಿತು ದೇವಾಲಯದ ದಾಖಲೆಗಳನ್ನು ಪರಿಶೀಲಿಸಬಹುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.