ADVERTISEMENT

ಶಿವಾಜಿನಗರದ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಹಗಲು ದರೋಡೆ

ಎನ್‌.ಚಂದರ್‌
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಶಿವಾಜಿನಗರದಲ್ಲಿನ ಬಿಎಂಟಿಸಿ ಬಸ್ ನಿಲ್ದಾಣವು ಅತ್ಯಂತ ದಟ್ಟ ಜನಸಂದಣಿಯ ಕೇಂದ್ರವಾಗಿದೆ. ಈ ಬಸ್‌ ನಿಲ್ದಾಣದಲ್ಲಿ ಬೆಂಗಳೂರು ಮಹಾನಗರ ಸಂಚಾರಿ ನಿಗಮವು ಹಲವು ಮೂತ್ರಾಲಯಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಿದೆ. ಪ್ರಯಾಣಿಕರು ಮೂತ್ರಾಲಯವನ್ನು ಉಚಿತವಾಗಿ ಉಪಯೋಗಿಸಬಹುದೆಂಬ ನಾಮಫಲಕಗಳು ಬಸ್‌ ನಿಲ್ದಾಣದ ಎಲ್ಲಾ ಕಡೆ ರಾರಾಜಿಸುತ್ತಿವೆ.

ಆದರೆ ಕೆಲವರು ನಾಮಫಲಕದ ಮೇಲೆ ಇರುವ ಉಚಿತ ಎಂಬ ಪದಗಳ ಮೇಲೆ ಖಾಸಗಿ ಜಾಹೀರಾತು ಚೀಟಿ ಅಂಟಿಸಿ, ಮೂತ್ರಾಲಯವನ್ನು ಉಪಯೋಗಿಸುವವರ ಹತ್ತಿರ ಹಣವನ್ನು ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ.

ಬಸ್‌ ನಿಲ್ದಾಣದಲ್ಲಿರುವ ಬಿಎಂಟಿಸಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಜಾಣ ಕುರುಡು, ಜಾಣ ಕಿವುಡರಂತೆ ವರ್ತಿಸಿ ಮೂತ್ರಾಲಯ ಮಾಫಿಯಾಗಳ ಹಗಲು ದರೋಡೆಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಅನುಮಾನಕ್ಕೆ ಕಾರಣರಾಗಿದ್ದಾರೆ.

ಸಾರಿಗೆ ಸಚಿವರು, ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಕೂಡಲೇ ಶಿವಾಜಿನಗರ ಬಸ್‌ ನಿಲ್ದಾಣದಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ ಕಡಿವಾಣ ಹಾಕಿ, ಬಡ, ಅಮಾಯಕ ಪ್ರಯಾಣಿಕರ ಹಿತರಕ್ಷಣೆ ಮಾಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.