ADVERTISEMENT

ಸಾಧಕರೆಲ್ಲರಿಗೂ ಮನ್ನಣೆ ಸಿಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ವಾಚಕರವಾಣಿಯಲ್ಲಿ ವಿಜಯಕಾಂತ ಪಾಟೀಲ ಅವರು ಗಹನವಾದ ಚರ್ಚೆ­ಗೆ ಕಾರಣ­ವಾಗು­ವಂಥ ವಿಚಾರ­ವೊಂದನ್ನು ಓದು­ಗರ ಮುಂದಿಟ್ಟಿದ್ದಾರೆ. ಅದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ­ರಿಗೆ ಸಂಬಂಧಿಸಿದ್ದು.    
               
ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನ­ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಷ್ಟೇ ಸಾಧನೆ ಮಾಡಿ­ರುವ, ನಮ್ಮ ನಾಡು-ನುಡಿಯ ರಕ್ಷಣೆ­ಗಾಗಿ  ತಮ್ಮ ಬದುಕನ್ನೇ ಮುಡಿಪಾ­ಗಿಟ್ಟಿರುವ ಅನೇ­ಕ­ರು ಬಾಳಿ ಹೋಗಿದ್ದಾರೆ. ಕೆಲವರು ಈಗಲೂ  ಕನ್ನಡ ನುಡಿ ಸೇವೆಯನ್ನು ಮಾಡುತ್ತಿದ್ದಾರೆ.
ಜಿ.ಎಸ್.ಶಿವರುದ್ರಪ್ಪ, ದೇವನೂರ ಮಹಾದೇವ, ಪಾಟೀಲ ಪುಟ್ಟಪ್ಪ, ಭೀಮಸೇನ ಜೋಶಿ,  ಗುಬ್ಬಿ ವೀರಣ್ಣ,  ರಾಜ್‌ಕುಮಾರ್, ಸುಬ್ಬಯ್ಯ ನಾಯ್ಡು, ಸರ್‌ ಎಂ.ವಿಶ್ವೇಶ್ವರಯ್ಯ-, ಸಿ.ಎನ್.ಆರ್. ರಾವ್‌ ಮೊದಲಾದ ಮಹ­ನೀಯರು ತಮ್ಮದೇ ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿದ್ದಾರೆ. ಇವರೆಲ್ಲರ  ಪರಿಚಯ ಪ್ರಾಥಮಿಕ ಶಾಲಾ ಹಂತದಲ್ಲೇ ನಮ್ಮ ಮಕ್ಕಳಿಗೆ ಆಗುವುದು ಬೇಡವೇ?  

ನಮ್ಮ ನಾಡಿನ ಎಲ್ಲ ರಂಗಗಳ ಹಿರಿಯ ಸಾಧಕರ ಭಾವಚಿತ್ರಗಳು (ಅವರ ಪರಿಚಯ­ದೊಂದಿಗೆ) ಶಾಲೆಗಳ­ ತರಗತಿ­ಗಳ ಕೋಣೆ­ಗಳಲ್ಲಿ ಪ್ರದರ್ಶಿ­ಸುವುದು ಉತ್ತಮವಲ್ಲವೇ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.