ಸಿಟಿ ಮಾರ್ಕೆಟ್ ಬಳಿ ಇರುವ ಪಾದಚಾರಿಗಳ ಸುರಂಗಮಾರ್ಗ ಮಳೆ ಬಂದಾಗ ಸೋರುತ್ತದೆ. ಭಾರಿ ಮಳೆ ಬಿದ್ದಾಗ ಸುರಂಗದೊಳಗೆ ಈಜುಕೊಳ ಸೃಷ್ಟಿಯಾಗುತ್ತದೆ. ಟೌನ್ಹಾಲ್, ನೃಪತುಂಗ ರಸ್ತೆ ಹಾಗೂ ನಗರದ ಇನ್ನಿತರ ಸ್ಥಳಗಳಲ್ಲಿರುವ ಪಾದಚಾರಿ ಸುರಂಗಮಾರ್ಗಗಳದೂ ಇದೇ ದುಃಸ್ಥಿತಿ.
ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆಂದು ನಿರ್ಮಿಸಿದ ಈ ಮಾರ್ಗಗಳೂ ಸೋರಿದರೆ ಪಾದಚಾರಿಗಳು ಓಡಾಡುವುದು ಹೇಗೆ? ಬಿಬಿಎಂಪಿಯವರು ಇತ್ತ ಗಮನಹರಿಸುವರೇ?
– ಕೆ. ರಾಮಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.