ADVERTISEMENT

25 ವರ್ಷಗಳ ಹಿಂದೆ: ಶನಿವಾರ 27.9.1997

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 19:30 IST
Last Updated 26 ಸೆಪ್ಟೆಂಬರ್ 2022, 19:30 IST
   

ಇಂಡೊನೇಷ್ಯಾ ವಿಮಾನ ದುರಂತ 234 ಪ್ರಯಾಣಿಕರು ಸಾವು

ಜಕಾರ್ತ, ಸೆ. 26 (ಎಪಿ, ಎಎಫ್‌ಪಿ)– ಇಂಡೊನೇಷ್ಯಾದ ಉತ್ತರಕ್ಕಿರುವ ಸುಮಾತ್ರಾ ದ್ವೀಪದಲ್ಲಿ ಇಂದು ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಚಾಲಕ ವರ್ಗದ 12 ಮಂದಿ ಸೇರಿದಂತೆ ಎಲ್ಲ 234 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಇಂಡೊನೇಷ್ಯಾದ ‘ಗರುಡ’ ಏರ್‌ ಲೈನ್ಸ್‌ಗೆ ಸೇರಿದ ಜಿಎ– 152 ಏರ್ ಬಸ್ ಮೆಡಾನ್ ಪಟ್ಟಣದ ಪೊಲೊನಿಯಾ ನಿಲ್ದಾಣದಲ್ಲಿ ಇಳಿಯುವ ಯತ್ನದಲ್ಲಿದ್ದಾಗ ಭಾರಿ ಕಾಳ್ಗಿಚ್ಚಿನಿಂದ ಆವರಿಸಿದ್ದ ದಟ್ಟ ಹೊಗೆಯಿಂದಾಗಿ ಮರಕ್ಕೆ ಅಪ್ಪಳಿಸಿ ಸ್ಫೋಟಗೊಂಡಿತು ಎಂದು ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇಂಡೊನೇಷ್ಯಾದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನಿಂದಾಗಿ ಎದ್ದಿರುವ ದಟ್ಟ ಹೊಗೆ ಈ ಭೀಕರ ದುರಂತಕ್ಕೆ ಕಾರಣ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.