ನಾವೆಲ್ಲರೂ ತಿಳಿದೋ ತಿಳಿಯದೆಯೋ ತಪ್ಪು ಮಾಡಿದವರೇ. ತಪ್ಪು ಎಂದು ತಿಳಿದಾಗ ಅದನ್ನು ತಿದ್ದಿಕೊಳ್ಳುವ ಅವಕಾಶ ಎಲ್ಲರಿಗೂ ಇದ್ದೇ ಇರುತ್ತದೆ. ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿನ ಪರೀಕ್ಷೆಗೆ ಸಹಕರಿಸದ ಕಾರಣಕ್ಕೆ ಎಲ್ಲರ ಸಿಟ್ಟಿಗೆ ಕಾರಣರಾಗಿದ್ದ ತಬ್ಲೀಗ್ ಸಂಘಟನೆಯ ಕೆಲ ಸದಸ್ಯರು ಇಂದುಪ್ಲಾಸ್ಮಾ ಥೆರಪಿಗೆ ಪ್ಲಾಸ್ಮಾ ಕೊಡಲು ನಿರ್ಧರಿಸಿದ್ದಾರೆ.
ಎಲ್ಲ ದಾನಕ್ಕಿಂತ ಪ್ಲಾಸ್ಮಾ ದಾನ ಮೇಲು ಎನ್ನುವ ಈ ಸಂದರ್ಭದಲ್ಲಿ ಇವರ ನಿರ್ಧಾರವನ್ನು ಮೆಚ್ಚಲೇಬೇಕು. ಈ ಜೀವನ ಪ್ರಯಾಣದಲ್ಲಿ ಅಂಕುಡೊಂಕನ್ನು ತಿದ್ದಿಕೊಂಡಾಗಲೇ ಅಲ್ಲವೆ ನಾವು ಅಪೂರ್ಣತೆಯಿಂದ ಪೂರ್ಣತೆಯ ಕಡೆಗೆ ಸಾಗುವುದು.
-ವಿಜಯಮಹಾಂತೇಶ, ಬಂಗಾರಗುಂಡ, ಮುದ್ದೇಬಿಹಾಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.