ADVERTISEMENT

ಪ್ರಬುದ್ಧ ಸಮಾಜ

ಹೊಸಮನೆ ವೆಂಕಟೇಶ ​ಟಿ.ನರಸೀಪುರ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST

ಕೆಲವು ದಶಕಗಳ ಹಿಂದೆ ಮಾಧ್ಯಮಗಳು ಇಷ್ಟು ಪ್ರಬಲವಾಗಿರಲಿಲ್ಲ. ಆದರೂ, ಗಲಭೆಗಳು ಬೇಗ ಒಂದೆಡೆಯಿಂದ ಇನ್ನೊಂದೆಡೆಗೆ ಸಾಂಕ್ರಾಮಿಕ ರೋಗದ ರೀತಿ ಹಬ್ಬುತ್ತಿದ್ದವು.

ಈಗ ಮೀಡಿಯಾಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಅದನ್ನು ಪ್ರಚೋದನೆಗಾಗಿ ಬಳಸುತ್ತಿರುವವರನ್ನೂ ನೋಡುತ್ತಿದ್ದೇವೆ. ಆದರೂ, ಗಲಭೆ ಎಂಬ ರೋಗ, ಎಲ್ಲಿ ಕಾಣಿಸಿಕೊಳ್ಳುತ್ತಿದೆಯೋ ಆ ಎಲ್ಲೆಯನ್ನು ಮೀರಿ ಹಬ್ಬುತ್ತಿಲ್ಲ.

ಈಗ ನನಗೆ ಖಾತ್ರಿಯಾಗಿದೆ, ನಮ್ಮ ಜನ ಎಚ್ಚೆತ್ತುಕೊಂಡಿದ್ದಾರೆ. ಸಮಾಜ ಪ್ರಬುದ್ಧಗೊಂಡ ಲಕ್ಷಣ ಇದು. ನಾವು ಇನ್ನೂ ಭರವಸೆಯನ್ನು ಇಟ್ಟುಕೊಳ್ಳಬಹುದು. ಇದಕ್ಕಲ್ಲವೇ ದೊಡ್ಡವರು ಹೇಳಿದ್ದು, ‘ಎಲ್ಲರನ್ನೂ ಎಲ್ಲ ಕಾಲಕ್ಕೂ ಮರುಳು ಮಾಡಲಾಗುವುದಿಲ್ಲ’ ಎಂದು?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.