ವೀರಶೈವ– ಲಿಂಗಾಯತ ಮತದಲ್ಲಿ ಇಷ್ಟಲಿಂಗವನ್ನು ಬೇಡಿದ ಭಕ್ತರಿಗೆ ಮಾತ್ರ ಗುರು ಮಠದವರು ನೀಡುವ ಸಂಪ್ರದಾಯವಿದೆ. ಅದಕ್ಕೆ ಅದರದೇ ಆದ ಧಾರ್ಮಿಕ ಪಾವಿತ್ರ್ಯ ನಿತ್ಯಾನುಸಂಧಾನ; ಆಚರಣೆಯ ಕಟ್ಟುಪಾಡುಗಳಿರುತ್ತವೆ. ಅದನ್ನು ಪಡೆದಂದಿನಿಂದ ದೇಹದಲ್ಲಿ ಧಾರಣೆ ಮಾಡಿಕೊಂಡು ನಿತ್ಯಾಭಿಷೇಕ ಮಾಡಬೇಕಾಗುತ್ತದೆ. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರೆನ್ನುವ ಮಾತ್ರಕ್ಕೆ ರಾಹುಲ್ ಗಾಂಧಿ ಅವರಿಗೆ ಇಷ್ಟಲಿಂಗ ನೀಡಿ ಗೌರವಿಸಿದ್ದು ಅಷ್ಟು ಉಚಿತವಲ್ಲ.
- ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.