ADVERTISEMENT

ವಾಚಕರ ವಾಣಿ: ಮಹನೀಯರ ಮಾದರಿ ನಡೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 17:51 IST
Last Updated 24 ಫೆಬ್ರುವರಿ 2021, 17:51 IST

‘ಮಠಗಳ ಪೋಷಣೆ ಮತ್ತು ಭಕ್ತರು’ ಎಂಬ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ (ಸಂಗತ ಫೆ. 24) ಪ್ರಸ್ತುತ ಸಂದರ್ಭದಲ್ಲಿ ಎಲ್ಲರಿಗೂ ದಾರಿದೀಪವಾಗಬೇಕಿದೆ. ಸಿದ್ಧೇಶ್ವರ ಶ್ರೀಗಳು ಆತ್ಮಸಾಕ್ಷಿಗೆ ಬದ್ಧರಾಗಿ ಪ್ರಶಸ್ತಿ, ಪುರಸ್ಕಾರ, ಅನುದಾನ ಎಲ್ಲವನ್ನೂ ವಿನಮ್ರತೆಯಿಂದ ತ್ಯಜಿಸಿರುವುದು ಹಾಗೆಯೇ ಮೃತ್ಯುಂಜಯ ಸ್ವಾಮೀಜಿ ಅವರು ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರು ತಮ್ಮ ಮಠಕ್ಕೆ ಭೇಟಿ ನೀಡಿದಾಗ, ಅವರ ಬರುವಿಕೆಗಿಂತ ವಿದ್ಯಾರ್ಥಿಗಳ ಊಟಕ್ಕೆ ಧಾನ್ಯ ಸಂಗ್ರಹಿಸಲು ತೆರಳುವುದಕ್ಕೆ ಆದ್ಯತೆ ನೀಡಿದ್ದುದು ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ನುಡಿಯನ್ನು ನೆನಪಿಗೆ ತರುತ್ತದೆ. ಇಂತಹ ಮಹನೀಯರಿಂದಲೇ ಅಲ್ಲವೆ ಆದರ್ಶ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಿರುವುದು. ಈಗಿನ ಪರಿಸ್ಥಿತಿ ಬೇರೆಯೇ ಇದೆ. ಅನುದಾನ, ಪುರಸ್ಕಾರಕ್ಕಾಗಿ ಪ್ರಭಾವಿಗಳ ಮೇಲೆ ಒತ್ತಡ ಹಾಕುವಂತಹ ಕಾಲಘಟ್ಟ ಇದು. ಮಹನೀಯರ ಸರಳ–ಸಜ್ಜನಿಕೆಯ ನಡೆ ಎಲ್ಲರಿಗೂ ಸ್ಫೂರ್ತಿದಾಯಕವಾಗಲಿ.

-ಸೌಮ್ಯ ಚೆಲುವರಾಜ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT