ADVERTISEMENT

ನಡೆಯಲಿ ಜನಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 19:05 IST
Last Updated 7 ಅಕ್ಟೋಬರ್ 2022, 19:05 IST
   

‘ಹಿಂದೂಗಳು ಶಸ್ತ್ರಗಳನ್ನು ಪೂಜಿಸಿದರೆ ಸಾಲದು, ಬಳಸುವುದನ್ನೂ ಕಲಿಯಬೇಕು’ ಎಂಬ ವಿಎಚ್‌ಪಿ ಮುಖಂಡರೊಬ್ಬರ ಹೇಳಿಕೆಗೆ ‘ಸಾಮಾನ್ಯರಿಗೇಕೆ ಶಸ್ತ್ರ ಬಳಕೆ’ ಎಂದು ತಾ.ಸಿ.ತಿಮ್ಮಯ್ಯ ಅವರು ಕೇಳಿರುವುದು (ವಾ.ವಾ., ಅ. 7) ದೇಶದ ಶಾಂತಿ– ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವಲ್ಲಿ ಓದುಗರಿಗೆ ಒಳ್ಳೆಯ ಸಂದೇಶ ನೀಡಿದೆ. ದ್ವೇಷಭಾಷಣ, ಪ್ರಚೋದನಾ ಭಾಷಣ ತಡೆಯುವಲ್ಲಿ ಮತ್ತು ದ್ವೇಷ ಹರಡುವವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿವೆ. ದ್ವೇಷ ಹರಡುವವರ ವಿರುದ್ಧ ಜನಜಾಗೃತಿ ಅಭಿಯಾನಗಳು ನಡೆಯಬೇಕು.

-ಹುಸೇನಬಾಷಾ ತಳೇವಾಡ,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT