ಸ್ವಾಮೀಜಿಯಾಗಲು ಹೊರಟಿರುವ ರಾಜಕಾರಣಿ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಕೆ.ವಿ.ವಾಸು ಅವರು ‘ಪರಮಾರ್ಥ ಅರಿತ ರಾಜಕಾರಣಿ’ ಎಂದಿರುವುದು (ವಾ.ವಾ., ಏ. 8) ಸರಿಯಷ್ಟೆ. ಆದರೆ ಪುಟ್ಟಸ್ವಾಮಿ ಅವರು ಪೀಠಾಧಿಪತಿಯಾಗಲು ಮುಂದಾಗಿರುವುದು ಅವರಲ್ಲಿ ಹುಟ್ಟಿದ ವೈರಾಗ್ಯದಿಂದಾಗಲೀ ಅನುಭಾವದಿಂದಾಗಲೀ ಅಲ್ಲ. ಸ್ವಾಮೀಜಿಯೊಬ್ಬರು ‘ದೇವಿಯು ನೀವೇ ಪೀಠಾಧಿಪತಿಯಾಗಬೇಕೆಂದು ನುಡಿದಿದ್ದಾಳೆ’ ಎಂದು ಹೇಳಿದ ಭವಿಷ್ಯವಾಣಿಯಿಂದ ರೋಮಾಂಚನಗೊಂಡು ದಿಢೀರ್ ನಿರ್ಧಾರಕ್ಕೆ ಬಂದಿರುವುದು ಸ್ಪಷ್ಟ.
ಸಕಲ ಶಿಷ್ಟಾಚಾರ ಪಾಲಿಸಿಯೇ ಪೀಠವನ್ನು ಅಲಂಕರಿಸಿದ ಹಲವಾರು ಸ್ವಾಮೀಜಿಗಳು ಪೀಠಕ್ಕೆ ನ್ಯಾಯ ಒದಗಿಸಲಾರದೆ ತಲ್ಲಣವನ್ನು ಅನುಭವಿಸುತ್ತಿರುವ ಈ ಹೊತ್ತಿನಲ್ಲಿ, ಪುಟ್ಟಸ್ವಾಮಿ ಅವರ ನಡೆ ಮಾದರಿಯಾಗಲಿ ಎಂದು ಆಶಿಸೋಣ.
- ಜೆ.ಬಿ.ಮಂಜುನಾಥ,ಪಾಂಡವಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.