ಕಲಬುರ್ಗಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಸಾಹಿತ್ಯ ಸಮ್ಮೇಳನಕ್ಕೆ ನಾನು ಹೋಗಿದ್ದೆ. ವಿಶೇಷವೇನೂ ನೆನಪಾಗುತ್ತಿಲ್ಲ! ಕೃಷಿ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಬರಬೇಕು ಎಂಬುದು ನಿರ್ಣಯ ಆಗಬೇಕೆಂದು ಎರಡು ಸಮ್ಮೇಳನಗಳಲ್ಲಿ ಯತ್ನಿಸಿ ಯಶಸ್ವಿಯಾಗಿದ್ದೆ (ಒಮ್ಮೆ ಹಾ.ಮಾ.ನಾಯಕರು ನನ್ನ ಕಾಗದವನ್ನು ವಿಷಯ ನಿಯಾಮಕ ಸಮಿತಿಯಲ್ಲಿ ಮಂಡಿಸಿ ಪಾಸ್ ಮಾಡಿಸಿದರು). ಈಗ ರಾಯಚೂರು, ಧಾರವಾಡದಲ್ಲೂ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಿವೆ. ಎಲ್ಲಿಯೂ ಪದವಿ ಮಟ್ಟದಲ್ಲಿ ಕನ್ನಡ ಮಾಧ್ಯಮ ಬಂದಿಲ್ಲ.
ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ಆಗಿದೆ. ನೂರನೇ ಸಮ್ಮೇಳನವೂ ನಡೆದೀತು. ಆದರೆ, ನಿರ್ಣಯಗಳು (ಅದೂ ಬಹಿರಂಗ ಅಧಿವೇಶನದಲ್ಲಿ ಚರ್ಚೆಯಿಲ್ಲದೆ) ಆಗಬೇಕೇ? ಆಗದಿದ್ದರೆ ಒಂದು ಕೊರತೆಯೇ? ಪರಿಷತ್ತು ಮತ್ತು ಅದರ ಘಟಕಗಳು ಸಮ್ಮೇಳನ ನಡೆಸಲು ಸರ್ಕಾರದ ಬಜೆಟ್ ವ್ಯಯಿಸಲು ವಾಹಕಗಳಷ್ಟೆ, ಅನುಷ್ಠಾನಕ್ಕೆ ಒತ್ತಾಯಿಸಲು ಏನು ಮಾಡಬಲ್ಲವು? ಹಾಗೆಯೇ ಚಲನಚಿತ್ರ ಅಕಾಡೆಮಿಯೂ.
ಎಚ್.ಎಸ್.ಮಂಜುನಾಥ, ಗೌರಿಬಿದನೂರು
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.