ಬಂಗಾರಪೇಟೆ ತಾಲ್ಲೂಕಿನ ತಹಶೀಲ್ದಾರರು ಕೊಲೆಯಾಗಿರುವುದನ್ನು ತಿಳಿದು ದಿಗ್ಭ್ರಮೆಯಾಯಿತು. ಕೊರೊನಾ ಸಂಕಷ್ಟದಿಂದ ಬದುಕು ಅನಿಶ್ಚಿತತೆಗೆ ಒಳಗಾಗಿದೆ. ಜೀವ ಇದ್ದರೆ ಜೀವನ ಎಂಬ ಸ್ಥಿತಿ ಇದೆ. ಇದರ ನಡುವೆ, ತುಂಡು ಭೂಮಿಗಾಗಿ ಒಬ್ಬ ಮನುಷ್ಯನ ಜೀವ ತೆಗೆಯುವುದು ಅಸಹನೀಯವಾಗಿ ಕಾಣುತ್ತದೆ. ಸರ್ಕಾರದ ಕೆಲವು ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇರುವುದು ಈ ಕೃತ್ಯದಿಂದ ವೇದ್ಯವಾಗುತ್ತದೆ. ಅಧಿಕಾರಿಗಳು ಭಯಮುಕ್ತರಾಗಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ.
- ಡಾ. ಕೆ.ಎಸ್.ಗಂಗಾಧರ,ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.