ADVERTISEMENT

ಭಯಮುಕ್ತ ವಾತಾವರಣ ನಿರ್ಮಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಜುಲೈ 2020, 19:31 IST
Last Updated 10 ಜುಲೈ 2020, 19:31 IST

ಬಂಗಾರಪೇಟೆ ತಾಲ್ಲೂಕಿನ ತಹಶೀಲ್ದಾರರು ಕೊಲೆಯಾಗಿರುವುದನ್ನು ತಿಳಿದು ದಿಗ್ಭ್ರಮೆಯಾಯಿತು. ಕೊರೊನಾ ಸಂಕಷ್ಟದಿಂದ ಬದುಕು ಅನಿಶ್ಚಿತತೆಗೆ ಒಳಗಾಗಿದೆ. ಜೀವ ಇದ್ದರೆ ಜೀವನ ಎಂಬ ಸ್ಥಿತಿ ಇದೆ. ಇದರ ನಡುವೆ, ತುಂಡು ಭೂಮಿಗಾಗಿ ಒಬ್ಬ ಮನುಷ್ಯನ ಜೀವ ತೆಗೆಯುವುದು ಅಸಹನೀಯವಾಗಿ ಕಾಣುತ್ತದೆ. ಸರ್ಕಾರದ ಕೆಲವು ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇರುವುದು ಈ ಕೃತ್ಯದಿಂದ ವೇದ್ಯವಾಗುತ್ತದೆ. ಅಧಿಕಾರಿಗಳು ಭಯಮುಕ್ತರಾಗಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ.

- ಡಾ. ಕೆ.ಎಸ್‌.ಗಂಗಾಧರ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT