
ಪ್ರಜಾವಾಣಿ ವಾರ್ತೆದೀಪಾವಳಿ ಹಬ್ಬದ ಸಂಭ್ರಮದ ನೆಪದಲ್ಲಿ ಪಟಾಕಿ ಸಿಡಿಸಿ ಕ್ಷಣಿಕವಾಗಿ ಸಂತೋಷಪಡುತ್ತೇವೆ. ಆದರೆ ಅದರಿಂದ ಆಗುವ ಅನಾಹುತಗಳಿಗೆ ನಾವೇ ಜವಾಬ್ದಾರರಲ್ಲವೇ? ಮನುಕುಲಕ್ಕೆ ಮಾರಕವಾದ ಪಟಾಕಿ ಒಡೆಯುವುದನ್ನು ನಿಲ್ಲಿಸಬೇಕು. ದೀಪಾವಳಿಯನ್ನು ಪರಿಸರಸ್ನೇಹಿ ಹಬ್ಬವನ್ನಾಗಿಸೋಣ.
ರಾಜಸ್ಥಾನ ಸರ್ಕಾರವು ಪಟಾಕಿ ಮಾರಾಟ ನಿಷೇಧಕ್ಕೆ ಮುಂದಾಗಿರುವುದು ಶ್ಲಾಘನೀಯ. ಇಡೀ ದೇಶವು ಪಟಾಕಿಯಿಂದ ಮುಕ್ತವಾಗಿ ಸ್ವಚ್ಛ ಭಾರತ ನಿರ್ಮಾಣವಾಗಲಿ, ಆಗಲೇ ಸರ್ವರೂ ಆರೋಗ್ಯವಂತರಾಗಿರಲು ಸಾಧ್ಯ.
- ಹಣಮಂತ ಎಸ್. ಬಡಿಗೇರ್,ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.