ADVERTISEMENT

ದೇವರ ಕೆಲಸ!

ಪ್ರೊ ಆರ್‌ ವಿ ಹೊರಡಿ ಧಾರವಾಡ
Published 7 ಸೆಪ್ಟೆಂಬರ್ 2018, 19:30 IST
Last Updated 7 ಸೆಪ್ಟೆಂಬರ್ 2018, 19:30 IST

ನಮ್ಮ ವಿಧಾನಸೌಧವು ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ತಲೆಬರಹವನ್ನು ಹೊತ್ತು ಕಂಗೊಳಿಸುತ್ತಿದೆ. ನೂರು ದಿನ ಮುಖ್ಯಮಂತ್ರಿಯಾಗಿ ಮುಂದುವರಿದದ್ದೇ ಒಂದು ‘ಮಹಾ ಸಾಧನೆ’ ಎಂಬಂತೆ ಮುಖ್ಯಮಂತ್ರಿಯ ಅಭಿಮಾನಿಗಳು ‘ಕುಮಾರ ಶತಕ’ ಸಾಧನೆಯನ್ನು ಹಾಡಿ ಹೊಗಳುತ್ತಿದ್ದಾರೆ. ಎಂಥ ಜನ!

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಇಲ್ಲಿಯವರೆಗೆ ಹತ್ತಾರು ಗುಡಿ, ಗುಂಡಾರ, ದೇವಾಯಲಯಗಳನ್ನು ಸುತ್ತಿ, ಸರ್ಕಾರಿ ಖರ್ಚಿನಲ್ಲಿ ಪೂಜೆ, ಪುನಸ್ಕಾರ, ಯಜ್ಞ, ಯಾಗ, ಹವನಗಳನ್ನು ಮಾಡಿದ್ದೇ ಮುಖ್ಯಮಂತ್ರಿಯವರ ಜನಸೇವೆಯ ಮಾದರಿ. ಸರ್ಕಾರದ ನೂರು ದಿನಗಳ ಸಾಧನೆಯಲ್ಲಿ ‘ದೇವರ ಕೆಲಸ’ವೇ ಹೆಚ್ಚಾಗಿ ಕಾಣಿಸುತ್ತಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT