ADVERTISEMENT

ಚಿತ್ತಸ್ವಾಸ್ಥ್ಯ ಮೂಡುವುದು ಎಂದು?

ಪ್ರೊ.ಎಸ್.ಆರ್.ದೇವಪ್ರಕಾಶ್. ತುಮಕೂರು
Published 4 ಡಿಸೆಂಬರ್ 2018, 20:15 IST
Last Updated 4 ಡಿಸೆಂಬರ್ 2018, 20:15 IST

ನಾವು ಬರ್ಬರ ಜಗತ್ತಿಗೆ ಜಾರುತ್ತಿದ್ದೇವೆಯೇ? ಗೋಹತ್ಯೆ ಗುಮಾನಿಯಿಂದ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಇಬ್ಬರು ಮೃತಪಟ್ಟಿರುವ ಸುದ್ದಿ ಓದಿ (ಪ್ರ.ವಾ., ಡಿ.4) ಇಂಥ ಸಂದೇಹ ಮೂಡುವುದು ಸಹಜ.

ಪುರಂದರ ದಾಸರ, ‘ಮಾನವ ಜನ್ಮ ದೊಡ್ಡದು’ ಎಂಬ ದೈವೋಕ್ತಿ ಗಾಳಿಯಲ್ಲಿ ತೂರಿಹೋಯಿತೇ? ಕೇಸರಿ ಉಡುಪಿನ ರಕ್ತ ಕಳಂಕದ ಜನರು ಖಂಡಿತ ಉದಾತ್ತ ಧ್ಯೇಯ ಮತ್ತು ಸಹನೆಯ ಪ್ರತೀಕವಾದ ಹಿಂದೂ ಧರ್ಮದ ಪ್ರತಿನಿಧಿಗಳಲ್ಲ.

ಇಂತಹ ತಪ್ಪು ವಿಶ್ವಾಸದ ಧಾರ್ಮಿಕ ಆವೇಶವನ್ನು ಬಲವಾಗಿ ಹತ್ತಿಕ್ಕಬೇಕು. ಮತ ಶ್ರದ್ಧೆಯ ಭ್ರಾಂತಿಯು ಹೋಗಿ ಚಿತ್ತಸ್ವಾಸ್ಥ್ಯ ಬಲಗೊಳ್ಳಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.