ADVERTISEMENT

ವಾಚಕರ ವಾಣಿ| ಇವರೂ ಕೊರೊನಾ ವಾರಿಯರ್ಸ್‌

​ಪ್ರಜಾವಾಣಿ ವಾರ್ತೆ
Published 21 ಮೇ 2020, 22:40 IST
Last Updated 21 ಮೇ 2020, 22:40 IST

ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ಪೊಲೀಸರ ಜೊತೆಗೆ ಕೊರೊನಾ ವಾರಿಯರ್ಸ್‌ ಎಂದು ನಾವು ಕರೆಯಬೇಕಾದ ಇನ್ನೊಂದು ವರ್ಗವೆಂದರೆ ಬ್ಯಾಂಕ್ ಸಿಬ್ಬಂದಿ. ಲಾಕ್‍ಡೌನ್ ಘೋಷಣೆಯಾದಾಗಿನಿಂದಲೂ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅವರಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿಲ್ಲ. ಜನ್‍ಧನ್ ಖಾತೆಗೆ ಸರ್ಕಾರ ಜಮಾ ಮಾಡಿದ ಹಣವನ್ನು ಪಡೆಯಲು ನೂಕುನುಗ್ಗಲು ಉಂಟಾದಾಗ ಸಹ ಬ್ಯಾಂಕಿನ ಸಿಬ್ಬಂದಿ ಅತ್ಯಂತ ಶಿಸ್ತುಬದ್ಧವಾಗಿ ಅದನ್ನು ನಿಭಾಯಿಸಿದ್ದು ಪ್ರಶಂಸನೀಯ.

ಅದೇ ರೀತಿ, ಈಗ ಕೇಂದ್ರ ಸರ್ಕಾರ ಘೋಷಿಸಿರುವ ₹ 20 ಲಕ್ಷ ಕೋಟಿಯ ಪ್ಯಾಕೇಜನ್ನು ಕಾರ್ಯರೂಪಕ್ಕೆ ತರುವಲ್ಲಿಯೂ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸಬೇಕಿದೆ. ನೆಲಕಚ್ಚಿರುವ ಕೃಷಿ, ಔದ್ಯಮಿಕ, ಸಾಮಾಜಿಕ, ವಾಣಿಜ್ಯ ಕ್ಷೇತ್ರಗಳ ಚಟುವಟಿಕೆಗಳು ಗರಿಗೆದರಿ, ಪೇಟೆಯಲ್ಲಿ ಹಣದ ಚಲಾವಣೆ ಆಗಬೇಕಾದರೆ ಬ್ಯಾಂಕುಗಳು ಇನ್ನು ಮುಂದೆಯೂ ಕೊರೊನಾ ವಾರಿಯರ್ಸ್‌ ರೀತಿಯಲ್ಲೇ ಕೆಲಸ ಮಾಡಬೇಕಾಗಿದೆ. ಇದನ್ನೆಲ್ಲ ಪರಿಗಣಿಸಿ, ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಪ್ರಾಮುಖ್ಯ ನೀಡಬೇಕು.

-ಗಂಗಾಧರ ಅಂಕೋಲೆಕರ,ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.