ADVERTISEMENT

 ಕಲ್ಪಿತ ಭೀತಿ ಮತ್ತು ಸಮೂಹ ಸನ್ನಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST

ಕೋವಿಡ್‌–19ಕ್ಕೆ ಕಲಬುರ್ಗಿಯಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಆದರೆ, ಅದೇ ಸಮಯದಲ್ಲಿ ಇತರ ರೋಗಗಳಿಂದ ಈ ಊರಿನಲ್ಲಿ ಎಷ್ಟು ಜನ ಸತ್ತಿದ್ದಾರೆ ಎಂಬುದನ್ನೂ ಜಿಲ್ಲಾಧಿಕಾರಿ ಬಹಿರಂಗಪಡಿಸಲಿ! ಕೋವಿಡ್‌ಗಿಂತ ಹೆಚ್ಚು ಮಾರಕ ರೋಗಗಳು ಈ ಹಿಂದುಳಿದ ಜಿಲ್ಲೆಯನ್ನು ಬಾಧಿಸುತ್ತಿವೆ.

ರಾಜ್ಯದಲ್ಲಿ ದಿನನಿತ್ಯ ಸಾಯುವವರಲ್ಲಿ ಕನಿಷ್ಠ 10 ಮಕ್ಕಳಾದರೂ ಅಪೌಷ್ಟಿಕತೆಯಿಂದ ಸತ್ತಿರುವುದು ಗ್ಯಾರಂಟಿ. ಕೊರೊನಾಗಿಂತ ಅಪೌಷ್ಟಿಕತೆಯೇ ಭಾರತಕ್ಕೆ ಹೆಚ್ಚು ಅಪಾಯಕಾರಿ. ಡೆಂಗಿ, ಹಕ್ಕಿಜ್ವರ, ಹಂದಿಜ್ವರ ಸಹ ಹೆಚ್ಚು ಅಪಾಯಕಾರಿ. ಆದರೆ ಕೊರೊನಾ ಬಗ್ಗೆ ಸೃಷ್ಟಿಯಾಗಿರುವ ಕಲ್ಪಿತಭೀತಿಯು ವಿಶ್ವದಲ್ಲಿಯೇ ಸಮೂಹಸನ್ನಿಯಾಗಿ ಬದಲಾಗಿದೆ. ಇದರ ಹಿಂದೆ ಯಾವ ಅಂತರರಾಷ್ಟ್ರೀಯ ವಾಣಿಜ್ಯ ಲಾಬಿ ಇದೆಯೋ?

-ಅನಿಲ್ ಪೂಜಾರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.