ಜಾತ್ಯತೀತ ಎಂಬ ಅಂಕಿತವನ್ನು ತನ್ನ ಹೆಸರಿನಲ್ಲಿಯೇ ಸೇರಿಸಿಕೊಂಡಿರುವ ಜೆಡಿಎಸ್ ಪಕ್ಷದ ಧುರೀಣರು, ಮಂಡ್ಯ
ದಲ್ಲಿ ಗೌಡರೇ ಗೆಲ್ಲಬೇಕು, ಬೇರೆ ಜಾತಿಯವರು ಅಲ್ಲಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂಬ ಅರ್ಥ ಬರುವ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿ, ಅತ್ಯಂತ ಕೀಳು ಮಟ್ಟದ ಜಾತಿ ರಾಜಕಾರಣದಲ್ಲಿ ತೊಡಗಿರುವುದು ಶೋಚನೀಯ.
ಸ್ವಾಮಿ ಶಿವರಾಮೇಗೌಡರೇ, ನಿಮ್ಮ ಈ ತರ್ಕವನ್ನೇ ಪಾಲಿಸಿದರೆ, ಕರ್ನಾಟಕದ ಮುಖ್ಯಮಂತ್ರಿ ಯಾವ ಜಾತಿಯವರಾಗಿರಬೇಕು? ಉತ್ತರಿಸುವಿರಾ?
– ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.