ADVERTISEMENT

ಭಯ ಹುಟ್ಟಿಸಬೇಡಿ!

ದಿನೇಶ್‌ ಕೆ.ಕಾರ್ಯಪ್ಪ
Published 26 ಜುಲೈ 2018, 19:30 IST
Last Updated 26 ಜುಲೈ 2018, 19:30 IST

ಶುಕ್ರವಾರ (ಜುಲೈ 27) ನಡೆಯಲಿರುವ ಖಗ್ರಾಸ ಚಂದ್ರಗ್ರಹಣ ಕುರಿತು ಕೆಲವು ಸುದ್ದಿಮಾಧ್ಯಮಗಳು ಅನಗತ್ಯ ಭಯ ಸೃಷ್ಟಿಸುತ್ತಿವೆ. ತಲೆಬುಡವಿಲ್ಲದ ಭವಿಷ್ಯ–ಜ್ಯೋತಿಷವನ್ನು, ಕಾಕತಾಳೀಯವಾಗಿ ಜರುಗಿದ ಕೆಲವು ದುರ್ಘಟನೆಗಳಿಗೆ ತಳಕು ಹಾಕಿ, ಪ್ರಳಯದ ಭೀತಿ ಸೃಷ್ಟಿಸಿ ಜನರಲ್ಲಿ ಗೊಂದಲ ಮೂಡಿಸಿವೆ.

‘ಗ್ರಹಣದ ಪರಿಣಾಮ ಭೀಕರವಾಗಿರುತ್ತದೆ’ ಎಂದಿರುವ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ, ಇದರಿಂದತಮಗೇನೂ ಭಯವಿಲ್ಲ ಎಂದೂ ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಮತ್ತು ಮಾಧ್ಯಮಗಳು ಇಂಥ ಭಯ ಸೃಷ್ಟಿಸುವ ಚಾಳಿಯನ್ನು ಬಿಡಬೇಕು.

ಗ್ರಹಣ ಎಂಬ ನೈಸರ್ಗಿಕ ಪ್ರಕ್ರಿಯೆ ಹೇಗೆ ಸಂಭವಿಸುತ್ತದೆ ಎಂಬ ವೈಜ್ಞಾನಿಕ ಅರಿವನ್ನು ಜನರಲ್ಲಿ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಮೌಢ್ಯಕ್ಕೆ ಒತ್ತು ನೀಡಿ, ಜನರಲ್ಲಿ ಗೊಂದಲ ಮೂಡಿಸುವ ಪ್ರವೃತ್ತಿಯನ್ನು ಬಿಡಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.