‘ನಮ್ಮ ಕಾರ್ಯಕರ್ತರು ಹೇಳಿದ ಕೆಲಸಗಳನ್ನು ಮಾಡದಿದ್ದರೆ ನಿಮ್ಮನ್ನು ಬೂಟುಗಾಲಿನಿಂದ ಒದೆಯುತ್ತೇವೆ. ಕೈಗಳನ್ನು ಕತ್ತರಿಸಿ ಹಾಕುತ್ತೇವೆ’ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಹುಟ್ಟುಹಾಕಿದ ಸಂಸ್ಥೆಯೊಂದರ ಉಪಾಧ್ಯಕ್ಷರು ಸರ್ಕಾರಿ ಅಧಿಕಾರಿಗಳಿಗೆ ಧಮಕಿ ಹಾಕಿದ್ದು ವರದಿಯಾಗಿದೆ (ಪ್ರ.ವಾ., ಡಿ. 3). ನಮ್ಮ ದೇಶದಲ್ಲಿ ಈಗ ನಡೆಯುತ್ತಿರುವುದು ಪ್ರಜಾರಾಜ್ಯವೋ ಅಥವಾ ಗೂಂಡಾ ರಾಜ್ಯವೋ ತಿಳಿಯದಾಗಿದೆ. ಇಂಥವರಿಂದ ನಮ್ಮ ದೇಶವನ್ನು ಆ ದೇವರೇ ರಕ್ಷಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.