ದೂರು ಬಂದರೆ ಪೊಲೀಸರಿಗೆ ವ್ಯಭಿಚಾರಿಯೂ ಒಂದೇ ವಿದ್ವಾಂಸರೂ ಒಂದೇ ಆದರೆ ಹೇಗೆ? ಹಾಗೆಂದು ಕಾನೂನು ಇಬ್ಬರಿಗೂ ಬೇರೆ ಬೇರೆ ಆಗಬಾರದು ಎಂಬುದೂ ನಿಜ. ಆದರೆ ಅದು ಸರಿಯಾಗಿ ವಿಚಾರಣೆ ನಡೆದು ಆರೋಪ ಸಾಬೀತಾದ ಮೇಲೆ ವಿಧಿಸಬೇಕಾದ ಶಿಕ್ಷೆ. ಪ್ರೊ. ಹಂಪನಾ ಅವರ ಹೇಳಿಕೆಯ ಹಿಂದಿನ ಸಾಮಾಜಿಕ ಕಾಳಜಿ ಏನು ಎಂಬುದನ್ನು ಪೊಲೀಸರು ತಾಳ್ಮೆಯಿಂದ ಗ್ರಹಿಸದೆ, ಯಾರೋ ದುರುದ್ದೇಶದಿಂದ ಕೊಟ್ಟ ದೂರನ್ನು ಒಪ್ಪಿ, ವಯೋವೃದ್ಧ ಸಾಹಿತಿಯನ್ನು ದೂರದ ಮಂಡ್ಯಕ್ಕೆ ಕರೆಸಿದ್ದು ಸರಿಯಲ್ಲ. ಬೇಕೆಂದರೆ ಸ್ಥಳೀಯ ಪೊಲೀಸರೇ ಮನೆಗೆ ತೆರಳಿ ಹೇಳಿಕೆ ಪಡೆಯಬಹುದಿತ್ತಲ್ಲವೇ?
ನಿಜವಾಗಿ ವಿಚಾರಣೆ ಹಾಗೂ ಶಿಕ್ಷೆ ಆಗಬೇಕಾದದ್ದು ಸಾರ್ವಜನಿಕ ಹಿತಾಸಕ್ತಿಯಿಲ್ಲದೆ ಕೇವಲ ದುರುದ್ದೇಶದ ದೂರು ನೀಡಿ ಕಿತಾಪತಿಗೆ ಕಾರಣವಾಗುವ ಕಿಡಿಗೇಡಿಗಳಿಗೆ.
- ಟಿ.ಗೋವಿಂದರಾಜು,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.